ಅವಿವಾಹಿತ ಅರ್ಚಕ, ಪುರೋಹಿತರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಇತ್ತೀಚಿಗೆ ಅರ್ಚಕ, ಪುರೋಹಿತರ ವೃತ್ತಿ ನಡೆಸುತ್ತಿರುವವರಿಗೆ ವಧು ದೊರಕುವುದು ಬಹು ಕಷ್ಟ ವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಅರ್ಚಕರು, ಪುರೋಹಿತರ ವೃತ್ತಿಯವರನ್ನು ಮದುವೆಯಾಗುವ ವಧುವಿಗೆ ಮೈತ್ರಿ ಯೋಜನೆಯಡಿ ಮೂರು ಲಕ್ಷ ರೂ. ಮೊತ್ತದ ಬಾಂಡ್ ವಿತರಿಸಲು ನಿರ್ಧಾರ ಮಾಡಿದೆ.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಚ್. ಸಚ್ಚಿದಾನಂದ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಯೋಜನೆಗೆ ಜನವರಿ 6 ರಂದು ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಅರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗುವ ವಧುವಿಗೆ ಮೂರು ಲಕ್ಷ ರೂ. ಮೊತ್ತದ ಬಾಂಡ್ ನೀಡಲಾಗುತ್ತದೆ.

ನಂತರ ಮೂರು ವರ್ಷಗಳ ಬಳಿಕ ಫಲಾನುಭವಿಗಳು ಬಾಂಡ್ ನ ಹಣವನ್ನು ಪಡೆಯಬಹುದು ಎಂಬ ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply