ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರ ಸುಪುತ್ರ 14 ವರ್ಷದ ಅಮೋಘವರ್ಷ ಪತ್ಲಪಟ್ಟಿ ವೈಲ್ಡ್ ಪೋಟೋಗ್ರಫಿ ಮಾಡಿದ್ದು, ಅವರ ಪೋಟೋ ಎಕ್ಸಿಬಿಷನ್ ಬೆಂಗಳೂರು ಚಿತ್ರಕಲಾ ಪರಿಷತ್ ನಲ್ಲಿಂದು ಉದ್ಘಾಟನೆಗೊಂಡಿದ್ದು ಜೂ.5 ತನಕ ನಡೆಯಲಿದೆ.
ಇದೇ ಸಂದರ್ಭದಲ್ಲಿ ಬಾಲಪ್ರತಿಭೆ ಅಮೋಘವರ್ಷನನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು. ವಾರ್ತಾ ಆಯುಕ್ತರಾದ ಡಾ.ಪಿ.ಎಸ್.ಹರ್ಷ ದಂಪತಿಗಳು ಹಾಜರಿದ್ದರು.