ಅಕ್ಷರವೆಂದರೆ ಶ್ರೀ ಕೃಷ್ಣ – ಶ್ರೀ ಪುತ್ತಿಗೆ ಶ್ರೀ

ಕಾರ್ಕಳ : ಅಕ್ಷರವೆಂದರೆ ಶ್ರೀಕೃಷ್ಣನೆಂದೇ ಅರ್ಥ ಹೀಗಾಗಿ ಅಕ್ಷರಾಭ್ಯಾಸ ಮಾಡುವುದೆಂದರೆ ಕೃಷ್ಣನ ಆರಾಧನೆ ಭಗವದ್ಗೀತೆಯನ್ನು ಬರೆಯುದೆಂದರಂತೂ ಪುಣ್ಯಾತಿ ಪುಣ್ಯದ ಕಾರ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ ಅವರು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹೊಸ ಸೇರ್ಪಡೆಯ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅನುಗ್ರಹ ವಚನ ನೀಡಿದರು.

ಇದೆ ಸಂದರ್ಭದಲ್ಲಿ 150 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶ್ರೀಪಾದರು ಕೋಟಿಗೀತಾ ಲೇಖನ ಯಜ್ಞದ ದೀಕ್ಷಾ ಸಂಕಲ್ಪ ಭೋದಿಸಿ ಪುಸ್ತಕ -ಸೂತ್ರಗಳನ್ನು ವಿತರಿಸಿದರು
ಓಮನ್ ನ ಉದ್ಯಮಿ ರಾಜೇಂದ್ರ ಎಂ ಶೆಟ್ಟಿ ಮುಖ್ಯ ಅತಿಥಿ ಗಳಾಗಿದ್ದರು, ಜೆಸಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷಾಚಿತ್ತರಂಜನ್ ಶೆಟ್ಟಿ ,ಜೆಸಿ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯಿನಿ , ಶಿಕ್ಷಕಿ ವಂದನಾ ರೈ , ಶ್ರೀಮಠದ ರತೀಶ್ ತಂತ್ರಿ , ರಮಣಾಚಾರ್ಯ , ಶಾಲಾ ಶಿಕ್ಷಕರ ವೃಂದ, ಪಾಲಕರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply