ಡಾ. ಅಶೋಕ್ ಕಾಮತ್ ಅವರ ಆತ್ಮಕಥನ ಗಳಲ್ಲಿ ಶಾಲಾ ಶಿಕ್ಷಣ ಪುಸ್ತಕ ಪರಿಚಯ ಕಾರ್ಯಕ್ರಮ

ಉಡುಪಿ. ಫೆ. 12: ಸಂಶೋಧನೆಗಳಿಂದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಭಾರತೀಯ ಸಂಸ್ಕೃತಿಯ ಗರಿಮೆಯನ್ನು ಉನ್ನತಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಡಾ. ನಿ.ಬೀ.ವಿಜಯ ಬಲ್ಲಾಳ ತಿಳಿಸಿದರು. ಡಾ. ಅಶೋಕ್ ಕಾಮತ್ ಅವರ ಆತ್ಮಕಥನ ಗಳಲ್ಲಿ ಶಾಲಾ ಶಿಕ್ಷಣ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಉದ್ಘಾಟಿಸಿದ ಅವರು ಶಿಕ್ಷಕರ ಬದ್ಧತೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಶಿಕ್ಷಣಕ್ಕೆ ಪೂರಕ ವಾಗಿರಬೇಕು ಎಂದು ತಿಳಿಸಿದರು.

ತುಮಕೂರಿನ ಡಾ. ರಾಮಕೃಷ್ಣ ಭಟ್, ಮಂಗಳೂರಿನ ಓ ಆರ್ ಪ್ರಕಾಶ್ ಪುಸ್ತಕ ಪರಿಚಯವನ್ನು ನಡೆಸಿದರು. ಶಿಕ್ಷಕ ಶಿಕ್ಷಣ ವಿದ್ಯಾಲಯಗಳಲ್ಲಿ ಪಠ್ಯಪುಸ್ತಕ ವಾಗುವ ಎಲ್ಲಾ ಅರ್ಹತೆಯನ್ನು ಈ ಪುಸ್ತಕವು ಗಳಿಸಿದೆ. ಸಂವೇದನಾಶೀಲ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸುವುದು, ಉನ್ನತ ಸಾಧನೆ ಗೆ ಅವರನ್ನು ಪ್ರೇರೇಪಿಸುವಂತಹ ಸೂಕ್ಷ್ಮ ವಿಷಯಗಳನ್ನು ಸರಳ ಭಾಷೆಯಲ್ಲಿ ಈ ಗ್ರಂಥದಲ್ಲಿ ನಿರೂಪಿಸಲಾಗಿದೆ ಎಂದು ತಿಳಿಸಿದರು. ಸಂಶೋಧನೆಗೆ ಮಾರ್ಗದರ್ಶನ ನೀಡಿದ ಡಾಕ್ಟರ್ ನಿಕೇತನ ಕಾಮತ್ ಅವರ ಈ ಸಂಶೋಧನೆಯ ಸಾಹಿತ್ಯಕವಾಗಿಯೂ ಶೈಕ್ಷಣಿಕವಾಗಿಯೂ ತುಂಬಾ ಮಹತ್ವದ್ದಾಗಿದೆ. ಮುಂದೆಯೂ ಹಲವಾರು ಸಂಶೋಧನೆಗಳಿಗೆ ಪೂರಕವಾಗಿದೆ ಎಂದರು. ಸಾಫಲ್ಯ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಅಶೋಕ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು. ಡಾ. ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ ಶ್ರೀಮತಿ ತಾರಾ ದೇವಿ ವಂದಿಸಿದರು. ನಾಗರಾಜ್ ಮೊಗೇರ ಕಾರ್ಯಕ್ರಮ ನಿರ್ವಹಣೆ ನಡೆಸಿದರು.

 
 
 
 
 
 
 
 
 
 
 

Leave a Reply