ಬಿಜೆಪಿ ಪ್ರಚಾರ ವಾಹನ ಮತ್ತು ಬೈಕ್‌ ನಡುವೆ ಅಪಘಾತ; ಬೈಕ್‌ ಸವಾರ ಮೃತ್ಯು!

ಬಿಜೆಪಿ ಪ್ರಚಾರ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರ ಯುವಕನೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಶಾಸಕ ರಾಜೇಶ್ ನಾಯ್ಕ ಅವರ ‘ಗ್ರಾಮ ವಿಕಾಸ’ ಪಾದಯಾತ್ರೆಯ ಸಂದರ್ಭ ಈ ಘಟನೆ ನಡೆದಿದೆ. ಬಸ್ತಿ ನಿವಾಸಿ ತರಕಾರಿ ನಾರಾಯಣ ಸಪಲ್ಯರ ಪುತ್ರ ವಿಜೀತ್ @ವಿಜಿ (37) ಸಾವನ್ನಪ್ಪಿರುವ ಯುವಕ. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಶಾಸಕ ರಾಜೇಶ್ ನಾಯ್ಕ ಅವರ ಪಾದಯಾತ್ರೆಯ ಪ್ರಚಾರ ಮಾಡುತ್ತಿದ್ದ ತೆಲಂಗಾಣ ರಾಜ್ಯದ ನೋಂದಣಿಯ ಜೀಪ್ ಮತ್ತು ಬೈಕ್ ಮಧ್ಯೆ ನರಹರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

 
 
 
 
 
 
 
 
 
 
 

Leave a Reply