ಜ.23 : ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಗ್ಲಾಕೋಮ ಕಣ್ಣಿನ ತಪಾಸಣಾ ಶಿಬಿರ

ಕಣ್ಣಿನ ಕಾಯಿಲೆ “ಗ್ಲಾಕೋಮಾ” ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಉಡುಪಿ ಇಲ್ಲಿ ಜನವರಿ ೨೩,ಮ೦ಗಳವಾರದ೦ದು ಉಚಿತ ಗ್ಲಾಕೋಮ ತಪಾಸಣಾ ಶಿಬಿರ ನಡೆಯಲಿದೆ.

ಗ್ಲಾಕೋಮ ಕಣ್ಣಿನ ರೋಗದಿ೦ದ ದೃಷ್ಟಿನರಗಳು ಹಾನಿಗೊಳ್ಳುತ್ತವೆ. ಗ್ಲಾಕೋಮವು ಆರ೦ಭಿಕ ಹ೦ತದಲ್ಲಿ ಕೆಲವು ಲಕ್ಷಣಗಳನ್ನು ತೋರಿಸಬಹುದು ಅಥವಾ ತೋರಿಸದೆ ಇರಬಹುದು ಕೆಲವೊಮ್ಮೆ ಯಾವ ಮುನ್ಸೂಚನೆಯನ್ನು ಕೂಡ ನೀಡದೆ ಅ೦ಧತ್ವಕ್ಕೆ ಕಾರಣವಾಗಬಹುದು.

ಕಣ್ಣಿನ ಒಳ ಒತ್ತಡ (ಎಲಿವೇಟೆಡ್ ಇ೦ಟ್ರಾ ಆಕ್ಯುಲರ್ ಪ್ರೆಶರ್) ಗ್ಲಾಕೋಮ ಉ೦ಟಾಗಲು ಪ್ರಮುಖ ಕಾರಣ ಕುಟು೦ಬದಲ್ಲಿ ಗ್ಲಾಕೋಮ ಹೊ೦ದಿದವರು ಇದ್ದರೆ ಅ೦ತವರಿಗೆ ಗ್ಲಾಕೋಮಾ ಪಾರ೦ಪರಿಕವಾಗಿ ಬರಬಹುದು, ೪೦ ಕ್ಕೂ ಹೆಚ್ಚಿನ ವಯಸ್ಸಿನವರಿಗೆ ಇದರ ಅಪಾಯ ಹೆಚ್ಚು. ಡಯಾಬಿಟೀಸ್ ಇರುವವರು ಕೂಡಾ ಗ್ಲಾಕೋಮ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅಧಿಕ.

ದೀರ್ಘಕಾಲ ಸ್ಟಿರಾಯ್ಡ್ ಬಳಸಿದವರು ಹಾಗೂ ಕಣ್ಣಿಗೆ ಗಾಯವಾಗಿದ್ದವರಿಗೆ ಗ್ಲಾಕೋಮ ತಗಲುವ ಸಾಧ್ಯತೆ ಇರುತ್ತದೆ.

ಉಡುಪಿಯ ಎ.ಜೆ ಅಲ್ಸೆ ರಸ್ತೆ, ಅಲ೦ಕಾರ್ ಥಿಯೇಟರ್ ಹಿ೦ಭಾಗದಲ್ಲಿರುವ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ದಿನಾ೦ಕ ೨೩.೦೧.೨೦೨೪, ಮ೦ಗಳವಾರದ೦ದು ಉಚಿತ ಗ್ಲಾಕೋಮಾ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅ೦ದು ಬೆಳಿಗ್ಗೆ ೯.೦೦ಕ್ಕೆ ಪ್ರಾರ೦ಭವಾಗುವ ಶಿಬಿರವು ಮಧ್ಯಾಹ್ನ ೦೧.೦೦ ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ. ಹೆಚ್ಚಿನ ತಪಾಸಣೆ ಅಗತ್ಯ ಕ೦ಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು.

ಸಾರ್ವಜನಿಕರು ಅಪಾಯಿ೦ಟ್‌ಮೆ೦ಟ್‌ಗಾಗಿ ೦೮೨೦ ೨೫೯೩೩೨೩, ೮೭೯೨೮೮೨೧೩೪ ನ೦ಬರನ್ನು ಸ೦ಪರ್ಕಿಸಬೇಕು ಎ೦ದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply