ವಿದ್ಯಾವಿಕಾಸ ಮತ್ತು ಬುನಾದಿ(ಶಿಶುವಾಟಿಕಾ ) ಶಿಕ್ಷಣ ಶಿಬಿರ ಉದ್ಘಾಟನಾ ಸಮಾರಂಭ.

ಪಾಂಡುರಂಗ ರಮಣ ನಾಯಕ‌ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರವನ್ನು ಶ್ರೀ ಗುರುದಾಸ ಶೆಣೈ ಕಾರ್ಯದರ್ಶಿ ಅಮೃತ ಭಾರತಿ ಟ್ರಸ್ಟ್ ಹೆಬ್ರಿ ಇವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.

ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ವಿದ್ಯಾ ವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ ಉದ್ಘಾಟನೆ ಗೊಂಡಿದೆ. ವಿವಿಧ ಜಿಲ್ಲೆಗಳಿಂದ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರು ತರಬೇತಿ ವರ್ಗದಲ್ಲಿ ಪಾಲ್ಗೊಂಡರು..ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಸಹ ಸಂಘಟನಾ ಕಾರ್ಯದರ್ಶಿ ಶ್ರೀ .ಜಿ ಆರ್ ಜಗದೀಶ್ ಪ್ರಾಸ್ತಾವಿಕ ಮಾತನಾಡಿ ವಿದ್ಯಾಭಾರತಿಯ ಧ್ಯೇಯ ಉದ್ದೇಶವನ್ನು ತಿಳಿಸುತ್ತಾ ಶಿಕ್ಷಣದಿಂದ ವ್ಯಕ್ತಿ ಬದಲಾವಣೆ ಹೊಂದುತ್ತಾನೆ ಎಂದರು.

ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಶ್ರೀ ವಸಂತ ಮಾಧವ ಸ್ವಾಗತಿಸಿದರು. ಪ್ರಾಂತ ಶಿಶುವಾಟಿಕಾ ಪ್ರಮುಖ್ ಶ್ರೀಮತಿ ಸ್ವರ್ಣ, ಶ್ರೀ ಉಮೇಶ್ ಎಮ್ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ, ಉಪಸ್ಥಿತರಿದ್ದರು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಶ್ರೀ ಮಹೇಶ್ ಹೈಕಾಡಿ ವಂದಿಸಿದರು. ಶ್ರೀಮತಿ ವಿಮಲ ಮಾತಾಜಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply