ಯುಪಿಎಂಸಿ ಪ್ರಿಮಿಯರ್ ಲೀಗ್ -23 ವಾಲಿಬಾಲ್ ಪಂದ್ಯಾಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏಪ್ರಿಲ್ 27ರಂದು ಯುಪಿಎಂಸಿ ಪ್ರಿಮಿಯರ್ ಲೀಗ್ – 23 ಅಂತರ್ಕಕ್ಷ್ಯಾ ವಾಲಿಬಾಲ್ ಪಂದ್ಯಾಟವು ಜರಗಿತು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಸಾಂಪ್ರದಾಯಿಕ ವಾಣಿಜ್ಯ ಮತ್ತು ಆಡಳಿತ ನಿರ್ವಹಣೆಯ ತರಗತಿಯ ಪಾಠಗಳಿಗೆ ಪ್ರಾಯೋಗಿಕತೆಯನ್ನು ಕಲ್ಪಿಸುವ ದೃಷ್ಟಿಯಿಂದ ಮಕ್ಕಳಿಗೇ ಜವಾಬ್ದಾರಿ ಇತ್ತು ನಡೆಸಿದ ಪಂದ್ಯಾಟವು ಇದಾಗಿದೆ.

ಐಪಿಲ್ ಮಾದರಿಯಲ್ಲಿ ಆಟಗಾರರ ಏಲಂ ನಡೆಸಿ ಆರು ತಂಡಗಳನ್ನು ರಚಿಸಿ ವಿದ್ಯಾರ್ಥಿಗಳು ನಡೆಸಿದ ಈ ಪಂದ್ಯಾಟವು ನಾಯಕತ್ವವೇ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿ ಯಾಗಿತ್ತು.

ಕಾಲೇಜಿನ ಉಪಪ್ರಾಚಾರ್ಯರಾದ ಆಶಾ ಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್, ವಿದ್ಯಾರ್ಥಿ ತಂಡಗಳ ಮಾಲಕರಾದ ರಚನ್ ಸಾಲ್ಯಾನ್, ಪ್ರಜ್ವಲ್ ಕಾಮತ್, ಕಿಶನ್ ಸುವರ್ಣ, ರುವೇಸ್, ಶ್ರವಣ್ ಕುಮಾರ್, ಶಶಾಂಕ್ ಉಪಸ್ಥಿತರಿದ್ದರು. ಪ್ರೇಂ ಸಾಯಿ ಸ್ವಾಗತಿಸಿದರು, ನೌಶಿನ್ ಧನ್ಯವಾದದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply