ಮಂಗಳೂರು ವಿಶ್ವವಿದ್ಯಾನಿಲಯ 2018-19 ರಲ್ಲಿ ನಡೆಸಿದ ಕಾಲೇಜು ವಾರ್ಷಿಕಾಂಕ ಸ್ಪರ್ಧೆಯ ‘ಬಿ’ ವಿಭಾಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ‘ಸುಪ್ರಭಾ’ ವಾರ್ಷಿಕಾಂಕವು ತೃತೀಯ ಸ್ಥಾನಗಳಿಸಿದೆ.
ವಿವಿಯ ಸೆನೆಟ್ ಸಭಾಂಗಣದಲ್ಲಿ ಡಿಸೆಂಬರ್ 23 ರಂದು ನಡೆದ ಶೈಕ್ಷಣಿಕ ಮಂಡಳಿಯ ಮಹಾಸಭೆಯಲ್ಲಿ ವಿವಿ ಉಪಕುಲಪತಿಗಳಾದ ಪ್ರೊಫೆಸರ್ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಇವರು ಪ್ರಶಸ್ತಿಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಹಾಗು ಸಂಚಿಕೆಯ ಸಂಪಾದಕ ಶ್ರೀ ರಾಘವೇಂದ್ರ ಜಿ.ಜಿ ಇವರಿಗೆ ಹಸ್ತಾಂತರಿಸಿದರು.
ವಿವಿಯ ಕುಲಸಚಿವರಾದ ಶ್ರೀ ರಾಜು ಮೊಘವೀರ, ಪರಿಕ್ಷಾಂಗ ಕುಲಸಚಿವರಾದ ಪ್ರೊ.ಕೆ.ಎಲ್.ಧರ್ಮ ಹಾಗು ಹಣಕಾಸು ಸಚಿವರಾದ ಪ್ರೊ. ನಾರಾಯಣ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.