ವಾರ್ಷಿಕಾಂಕ ಸ್ಪರ್ಧೆಯಲ್ಲಿ ಯು.ಪಿ.ಎಂ.ಸಿ ಯ ‘ಸುಪ್ರಭಾ’ ಸತತ  ೧೨ ನೇ ಬಾರಿ ಪ್ರಶಸ್ತಿಗೆ ಭಾಜನ 

ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2019-20 ರ ವಾರ್ಷಿಕಾಂಕ ಸ್ಪರ್ಧೆಯ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಆಗಸ್ಟ್ 4 ರಂದು ವಿವಿ ಯ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಜರಗಿದ ಶೈಕ್ಷಣಿಕ ಮಂಡಳಿಯ ಮಹಾಸಭೆಯಲ್ಲಿ ನಡೆಯಿತು.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ಸುಪ್ರಭಾ’ ಸಂಚಿಕೆಯು ಪ್ರಸ್ತುತ ವರ್ಷ ದ್ವಿತೀಯ ಬಹುಮಾನವನ್ನು ಗಳಿಸಿದ್ದು ನಿರಂತರ 12ನೇ ವರ್ಷದ ಪ್ರಶಸ್ತಿಯು ಇದಾಗಿರುತ್ತದೆ.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯರವರು ಪ್ರಶಸ್ತಿಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಹಾಗು ಸಂಚಿಕೆಯ ಪ್ರಧಾನ ಸಂಪಾದಕ ರಾಘವೇಂದ್ರ ಜಿ.ಜಿ ಯವರಿಗೆ ಹಸ್ತಾಂತರಿಸಿದರು ವಿವಿಯ ಕುಲಸಚಿವರಾದ ಡಾ.ಕಿಶೋರ್ ಕುಮಾರ್, ಪರಿಕ್ಷಾಂಗ ಕುಲಸಚಿವ ಪ್ರೊಫೆಸರ್ ಪಿ.ಎಲ್.ಧರ್ಮ, ಹಣಕಾಸು ಸಚಿವರಾದ ಡಾ.ಬಿ.ನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಚಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ  ತೃತೀಯ ಬಿ.ಕಾಂ ನ ಕು.ಅನುಶ್ರೀ ಪೈ, ತೃತೀಯ ಬಿಬಿಎ ಯ ಅಕ್ಷಯ್ ಶೇಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply