ನವೆಂಬರ್ 26- ಮಂಗಳೂರು ವಿವಿ ಅಂತರ್ಕಾಲೇಜು ಮಟ್ಟದ ಈಜು ಸ್ಪರ್ಧಾಕೂಟ

ಉಡುಪಿ : ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಂಯೋಗದೊಂದಿಗೆ ಮಂಗಳೂರು ವಿವಿ ಅಂತರ್ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಈಜು ಸ್ಪರ್ಧಾಕೂಟವು ನವೆಂಬರ್ 26 ರಂದು ಅಜ್ಜರಕಾಡಿನ ಉಡುಪಿ ಜಿಲ್ಲಾ ಈಜುಕೊಳದಲ್ಲಿ ನಡೆಯಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಮಂಗಳೂರು ವಿವಿ ಮಟ್ಟದ ಮೊದಲ ಕ್ರೀಡಾ ಸ್ಪರ್ಧೆಯು ಇದಾಗಿದೆ.
ಪ್ರಮೋದ್ ಮಧ್ವರಾಜ್, ಯಶಪಾಲ್ ಸುವರ್ಣ, ಗಂಗಾಧರ ಜಿ, ರಾಘವೇಂದ್ರ ಕಿಣಿ, ಪೆರ್ಣಂಕಿಲ ಶ್ರೀಶ ನಾಯಕ್, ಗಿರೀಶ್ ಅಂಚನ್,ಷಜೇಮ್ಸ್ ಒಲಿವರ್ ಹಾಗೂ ರಾಮಕೃಷ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಯುಪಿಎಂಸಿಯ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್ ಈ ಕ್ರೀಡಾಕೂಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜ್ ಈ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿಕೊಂಡಿದೆ. ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿ ಇರಲಿದ್ದಾರೆ.

 
 
 
 
 
 
 
 
 
 
 

Leave a Reply