ವಸಂತಕಲಾ ಚಿತ್ರ ಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ,ನ. 1: ಪರಿಪೂರ್ಣತೆಗಾಗಿ ಸದಾ ಹಾತೊರೆಯುವ ಮನಸ್ಸು. ಹೊಸತನ್ನು ಹುಡುಕುವ ಹಸಿವು. ಕಲಾ ಕಲಿಕೆಗೆ ಮುಕ್ತ ಮನಸ್ಸು ವಸಂತಲಕ್ಷ್ಮಿ ಅವರ ಕಲಾ ಸಾಧನೆಯ ಯಶಸ್ಸಿನ ಸೂತ್ರಗಳು ಎಂದು ಮುಂಬೈ ಯ ಖ್ಯಾತ ಚಿತ್ರಕಲಾವಿದೆ ಶರ್ಮಿಳಾ ಗುಪ್ತೆ ಹೇಳಿದರು.

ಅವರು ನ. 1 ರಂದು ಕುಂಜಿಬೆಟ್ಟು ಅದಿತಿ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡ ವಸಂತ ಕಲಾ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾ ಶಿಷ್ಯೆಯಾಗಿ ಅವರ ಸಾಧನೆ ಅವಿಸ್ಮರಣೀಯ. ವಸಂತಲಕ್ಷ್ಮೀ ಅವರ ಕಲಾಕೃತಿಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸಿದರು.

ದೃಷ್ಟಿ ಆರ್ಟ್ ಗ್ಯಾಲರಿಯ ಮುಖ್ಯಸ್ಥ ರಮೇಶ್ ರಾವ್ ಅವರು ಮಾತನಾಡಿ ವಸಂತಲಕ್ಷ್ಮಿ ಕೇವಲ ಚಿತ್ರ ಕಲಾವಿದೆ ಮಾತ್ರವಲ್ಲ ವರ್ಣಗಳ ಒಡನಾಟವನ್ನೂ ಸಮರ್ಪಕವಾಗಿ ಬಳಸಿಕೊಂಡಿದ್ದರು. ಅವರ ಕಲಾಕೃತಿಗಳು ಶಾಶ್ವತವಾಗಿ ವೀಕ್ಷಿಸಲು ಸಾಧ್ಯವಾಗುವ ಹಾಗೆ ಯೋಜನೆಗಳು ರೂಪಿಸಬೇಕು ಅಂದು ಸಲಹೆ ನೀಡಿದರು.

ವಸಂತಲಕ್ಷ್ಮೀ ಯವರು ಅಕಾಲಿಕವಾಗಿ ಅಗಲಿದ ಒಂದು ವರ್ಷದಲ್ಲೇ ಅವರ ಚಿತ್ರ ಕಲಾ ಯಾತ್ರೆಯನ್ನು ಸಾರುವ “ವಸಂತ ಕಲಾ” ಚಿತ್ರಕಲಾ ಪ್ರದರ್ಶನವು ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಸುಮಾರು ಎಪ್ಪತ್ತು ಕಲಾಕೃತಿಗಳು  ಪ್ರದರ್ಶನಗೊಂಡವು.
ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ | ಕಿರಣ್ ಆಚಾರ್ಯ ಸ್ವಾಗತಿಸಿ, ರಾಜಮೋಹನ್ ವಾರಂಬಳ್ಳಿ ವಂದಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ ನ ಅರವಿಂದ ಹೆಬ್ಬಾರ್ ಪ್ರಸ್ತಾವಿಸಿದರು.

ಶಿಷ್ಯೆಯರಾದ ಸಮನ್ವಿ, ಅರ್ಚನಾ ಹಾಗೂ ಗಾರ್ಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು . ಉದ್ಘಾಟನಾ ಸಮಾರಂಭದ ಬಳಿಕ ಕಲಾವಿದೆ ವಸಂತಲಕ್ಷ್ಮೀ ಅವರ ಕುರಿತಾಗಿ ನಿರ್ಮಿಸಲಾದ ವಿಡಿಯೋ ಪ್ರದರ್ಶನ ಜರಗಿತು.

 
 
 
 
 
 
 
 
 
 
 

Leave a Reply