‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ

ಇತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆ ಯವರೊಂದಿಗೆ   ‘ಕುದ್ರು ನೆಸ್ಟ್’ ಹೋಮ್ ಸ್ಟೇಗೆ ಭೇಟಿ ನೀಡಿದ್ದರು.

ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಅವರು ಫೋಕಸ್ ರಾಘು ತೆಗೆದಿದ್ದ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿ, “ನಾನೊಂದು ದಿನ ಬಂದು ಇಲ್ಲಿರುತ್ತೇನೆ. ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಹೇಳಿದ್ದರು 

ಬಹು ಬೇಡಿಕೆಯ, ಹೊಸತು ಮತ್ತು ಹಳೆಯ ಎರಡೂ ತಲೆಮಾರುಗಳನ್ನು ಪ್ರಭಾವಿಸುತ್ತಿರುವ ನಟ, ನಿರೂಪಕ, ಕರ್ನಾಟಕದ ಕಣ್ಮಣಿ ರಮೇಶ್ ಅರವಿಂದ್ ರಾಘುರವರ  ಕೆಲಸಗಳನ್ನು ಮೆಚ್ಚಿ, ಕೊಟ್ಟ ಮಾತಿನಂತೆಯೇ ಕುದ್ರು ನೆಸ್ಟ್ ಗೆ ಬಂದೆ ಬಿಟ್ಟರು.  

ಕರಾವಳಿಯ ಶೈಲಿಯಲ್ಲೇ ಫೋಟೋ ಶೂಟ್ ಪ್ಲ್ಯಾನ್ ಮಾಡಿದ್ದೆ. ಫೋನಲ್ಲಿ ಎಲ್ಲವನ್ನೂ ತಿಳಿಸಿದ್ದೆ. ನೀವೇನು ಮಾಡಿಸ್ತೀರೋ ನಾನದಕ್ಕೆ ರೆಡಿ ಎಂದವರ ಉತ್ಸಾಹ ಇವತ್ತು ನೋಡಬೇಕು! ಅದೆಂತಹ ಎನರ್ಜಿ ಅವ ರೊಳಗಿದೆ. ಊಟ ಮಾಡಿದ್ದು ಮೂರು ಗಂಟೆಗೆ ಎಂಬುದು ಈಗ ನೆನಪಾಗುತ್ತಿದೆಯಷ್ಟೆ.

ರಮೇಶ್ ಅರವಿಂದ್ ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನ. “ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದಾಗ ನಮ್ಮಲ್ಲಂತೂ ವಿದ್ಯುತ್ ಸಂಚಾರ.

ರಮೇಶ್ ಅರವಿಂದ್ ಲವಲವಿಕೆ, ಶಿಸ್ತು, ಸಮಯಪ್ರಜ್ಞೆ, ಕಲಾರಾಧನೆ, ಕಮಿಟ್ಮೆಂಟಿಗೆ ಈ ವೀಡಿಯೋ ಸಾಕ್ಷಿ. ಯಕ್ಷಗಾನದ ವೇಷ ಭೂಷಣ ಹಾಗೂ ಹೆಜ್ಜೆ ಕಲಿಸಿದ್ದು  ಶೈಲೇಶ್ ತೀರ್ಥಹಳ್ಳಿ. ಅಂತೂ ಕುದ್ರು ನೆಕ್ಸ್ಟ್ ಹೌಸ್ ನಲ್ಲಿ ಸಂಭ್ರಮದ ವಾತಾವರಣ.   

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply