ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ,ಪ್ರವರ ಹಾಗೂ ಅಶ್ವಘೋಷ ಥಿಯೇಟರ್ ಬೆಂಗಳೂರು ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 16 ನಾಟಕ ಕಲಾವಿದರಿಗೆ 1200 ಮೊತ್ತದ ಆಹಾರದ ಕಿಟ್ಟನ್ನು ವಿತರಿಸಲಾಯಿತು.
ಉಡುಪಿಯ ಬೇರೆ ಬೇರೆ ನಾಟಕ ತಂಡದ ಕಲಾವಿದರಿಗೆ ರೋಟರಿ ಮಣಿಪಾಲ್ ಇದರ ಅಧ್ಯಕ್ಷ ಮನೋರೋಗ ತಜ್ಞ ಡಾ| ವಿರೂಪಾಕ್ಷ ದೇವರಮನೆಯವರು ಕಿಟ್ಟನು ವಿತರಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣಿೈ ಅಧ್ಯಕ್ಷರಾದ ಪ್ರೊ.ಶಂಕರ್, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ , ಸಮಿತ್ರ ಕೆರೆಮಠ, ರೂಪಶ್ರೀ ರಾಜೇಶ್, ಸಂಚಾಲಕ ರವಿರಾಜ್ ಹೆಚ್ ಪಿ ಮತ್ತಿತರರು ಉಪಸ್ಥಿತರಿದ್ದರು.