ಕೊಲ್ಲೂರು: ಗಾಯಕಿ ಅರ್ಚನ ಉಡುಪ ಬಳಗದವರಿಂದ “ಗಾನ ಸಿಂಚನ” ಕಾರ್ಯಕ್ರಮ

ದಿನಾಂಕ:12/01/2024 ರಂದು ಶ್ರೀ ಮೂಕಾಂಬಿಕ ದೇವಸ್ಥಾನ ಕೊಲ್ಲೂರು ಉಡುಪಿ ಜಿಲ್ಲೆ ಹಾಗೂ ಪಾಂಡೇಶ್ವರ ಕಾಳಿಂಗ ರಾವ್ ಪ್ರತಿಷ್ಠಾನ ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ, ನಾಡಿನ ಹೆಸರಾಂತ ಗಾಯಕಿ ಶ್ರೀಮತಿ ಅರ್ಚನ ಉಡುಪ ಬಳಗದವರಿಂದ “”ಗಾನ ಸಿಂಚನ”” ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಕಾರ್ಯಮ ಪ್ರಸ್ತುತ ಪಡಿಸಿದ, ಶ್ರೀಮತಿ ಅರ್ಚನ ಉಡುಪ ಅವರನ್ನು ಹಾಗೂ ಪ್ರಸಿದ್ಧ ಗಾಯಕ ಕಾರ್ಯಕ್ರಮ ನಿರೂಪಕರು ಆದ ಡಾ.ಗಣೇಶ್ ಗಂಗೊಳ್ಳಿ ಹಾಗೂ ಉದಯೋನ್ಮುಖ ಗಾಯಕಿ ಶ್ರೀಮತಿ ಸ್ಮಿತಾ ನಾಗರಾಜ್ ಉಡುಪಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು, ಇದೆ ಸಂದರ್ಭದಲ್ಲಿ ಅಕಸ್ಮಾತಾಗಿ ಶ್ರೀ ಮೂಕಾಂಬಿಕ ದೇವಾಲಯಕ್ಕೆ ಆಗಮಿಸಿದ ಪ್ರಸಿದ್ಧ ಗಾಯಕ ಶ್ರೀ ಅಜೇಯ ವಾರಿಯರ್ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮಕ್ಕೆ ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.

 
 
 
 
 
 
 
 
 
 
 

Leave a Reply