ಮಾರ್ಚ್ 27ರಂದು ನೃತ್ಯ ವರ್ಷಾ

ಅರೆಹೊಳೆ ಪ್ರತಿಷ್ಠಾನ ಮತ್ತು ಗಾನ ನೃತ್ಯ ಅಕಾಡೆಮಿಯ ಜಂಟಿ ಸಹಯೋಗದಲ್ಲಿ, ಪಾದುವಾ ರಂಗ ಅಧ್ಯಯನ ಕೇಂದ್ರ ಮತ್ತು ಅಸ್ತಿತ್ವ(ರಿ) ಆಶ್ರಯದಲ್ಲಿ ಪ್ರತೀ ವರ್ಷ ನಡೆಯಲಿರುವ ವಾರ್ಷಿಕ ನೃತ್ಯೋತ್ಸವದ ಕಾರ್ಯಕ್ರಮ ‘ನೃತ್ಯವರ್ಷಾ’ದ 2020ನೇ ಸಾಲಿನ ಕಾರ್ಯಕ್ರಮ ಇದೇ ಮಾರ್ಚ್ 27ರಂದು ಸಂಜೆ ಘಂಟೆ 6.00ಕ್ಕೆ ನಗರದ ಪಾದುವಾ ಥಿಯೆಟರ್ ಹಬ್ ನಲ್ಲಿ ನಡೆಯಲಿದೆ.

ಖ್ಯಾತ ನೃತ್ಯ ಗುರು ಸುಮಂಗಲಾ ರತ್ನಾಕರ್ ಅವರಿಗೆ 2020ನೇ ಸಾಲಿನ ‘ನಂದಗೋಕುಲ ಕಲಾ ಪುರಸ್ಕಾರ’ ಪ್ರದಾನ ನಡೆಯಲಿದ್ದು ನಂತರ ಕುಂದಾಪುರದ ನೃತ್ಯವಸಂತ ನಾಟ್ಯಾಲಯದ ವಿದುಷಿ ಪ್ರವಿತಾ ಅಶೋಕ್ ಅವರ ಮಾರ್ಗ ದರ್ಶನದಲ್ಲಿ ‘ನೃತ್ಯ ಸಿಂಚನ’ ಎಂಬ ವಿನೂತನ ನೃತ್ಯ ಪ್ರದರ್ಶನ ನಡೆಯಲಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಪ್ರಶಾಂತ್ ಭಟ್, ಕೆ ಸಿ ಪ್ರಭು ಹಾಗೂ ಹರಿಕೃಷ್ಣ ಪುನರೂರು ಅವರು ಭಾಗವಹಿಸ ಲಿದ್ದಾರೆ ಎಂದು ಹರಿಕೃಷ್ಣ ಪುನರೂರು ಹಾಗೂ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಚಿತ ಪ್ರವೇಶವಿದೆ ಎಂದು ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply