ಯಕ್ಷಗಾನ ಕಲಾರಂಗದ 21ನೆಯ ಮನೆ ಹಸ್ತಾಂತರ

ಉಡುಪಿ : ಮಂದಾರ್ತಿ ಮೇಳದ ಕಲಾವಿದ ಚಂದ್ರ ನಾಯ್ಕ ಹಾಗೂ ಮಕ್ಕಳಾದ ಯಕ್ಷಗಾನ ಕಲಾರಂಗದ ಉದ್ಯೋಗಿ ಸಂಗೀತಾ ಮತ್ತು ದ್ವಿತಿಯ ಪಿ.ಯು.ಸಿ ಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಗೀತಾರ ಕುಟುಂಬಕ್ಕೆ, ಎಚ್. ಎಸ್. ಶೆಟ್ಟಿ ಬೆಂಗಳೂರು ನೆರವಿನಿಂದ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ದ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು. 

ಎಚ.ಎಸ್. ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು. ಮಂದಾರ್ತಿ ದೇವಳದ ಧರ್ಮದರ್ಶಿ ಶ್ರೀ ಎಚ್. ಧನಂಜಯ ಶೆಟ್ಟಿ, ಕೆ. ಮಹೇಶ ಉಡುಪ ಮಂದಾರ್ತಿ,ಕೆ. ವಿಠ್ಠಲ ಶೆಟ್ಟಿ, ನಾಗರಾಜ ಶೆಟ್ಟಿ ಹಾಲಾಡಿ, ಯು.ವಿಶ್ವನಾಥ ಶೆಣೈ ಉಡುಪಿ, ರಾಜಗೋಪಾಲ ಆಚಾರ್ಯ ಉಡುಪಿ ಹಾಗೂ ಕಲಾರಂಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply