ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಒದಗಿಸುವ ಜವಾಬ್ಧಾರಿ ನಮ್ಮ ಮೇಲಿದೆ~ರಾಘವೇಂದ್ರ ನಾಯಕ್ ಅಜೆಕಾರ್

ಉಡುಪಿ​: ​ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರು, ಅರಣ್ಯ ಇಲಾಖೆ, ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಇವರ ಸಹಭಾಗಿತ್ವದೊಂದಿಗೆ, ಮಣಿಪಾಲದ ಶಾಂತಿನಗರದ ರಸ್ತೆಯ ಸನಿಹಗಳಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ, ಶನಿವಾರ ವನಮೋಹತ್ಸವ ಆಚರಿಸಿದರು.

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ ಅವರು, ಭಾರತ ದೇಶದಲ್ಲಿರುವ ಜನಸಂಖ್ಯೆ ಅನುಗುಣವಾಗಿ 33 ಶೇಕಡ​ದಷ್ಟು ಅರಣ್ಯವು ಉಸಿರಾಡಲು ಬೇಕಾಗಿದೆ. ಇವಾಗ ದೇಶದಲ್ಲಿ 17 ಶೇ​ಕಡದಷ್ಟು ಅರಣ್ಯವು ಉಳಿದುಕೊಂಡಿದೆ. ಹೀಗೆ ಪರಿಸರ ನಾಶ ಮುಂದುವರೆದರೆ, ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಹುದು. 

 

ಹಾಗಾಗಿ ಗಿಡಗಳು ನೆಡುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕೆಂದು ಹೇಳಿದರು. ಅತಿಥಿಯಾಗಿ ಉಪಸ್ಥಿತರಿದ್ದ ಮಲಬಾರ್ ಗೋಲ್ಡ್ ಆಬರಣ ಮಳಿಗೆಯ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್ ಅವರು, ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಒದಗಿಸ ಬೇಕೆಂದು ಕರೆ ನೀಡಿದರು. ನಾಗರಿಕ ಸಮಿತಿಯ ಸಂಚಾಲಕ ಒಳಕಾಡು ನಿತ್ಯಾನಂದ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರಾದ ದೇವಾರಜ್ ಪಾಣ, ಕೇಶವ ಪೂಜಾರಿ, ಚೌಡೇಶ್ವರಿ ಫ್ರೆಂಡ್ಸ್ ಇದರ ಅಧ್ಯಕ್ಷ ವಿನಯ ಕುಂದರ್​,​ ರಾಘವೇಂದ್ರ ರಾವ್, ರತ್ನಾಕರ್ ಶೆಟ್ಟಿ, ಸತೀಶ್ ಪೂಜಾರಿ, ಸುಧಾಕರ್ ಶೆಟ್ಟಿ, ಮೋಹನ್ ಶಾಂತಿನಗರ, ನಾಗರಿಕ ಸಮಿತಿಯ ಕೃಷ್ಣಮೂರ್ತಿ ಸಾಮಗ, ವಿನೋದ ಸಾಮಗ, ಯುಕ್ತ ಸಾಮಗ, ಕೆ. ಬಾಲಗಂಗಾಧರ್ ರಾವ್, ಕಮಲಾಕ್ಷ ಪ್ರಭು, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು. ಪರಿಸರವಾದಿ ವಿನಯಚಂದ್ರ ಸಾಸ್ತಾನ  ವಂದಿಸಿದರು.
 
 
 
 
 
 
 
 
 
 
 

Leave a Reply