ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರು, ಅರಣ್ಯ ಇಲಾಖೆ, ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಇವರ ಸಹಭಾಗಿತ್ವದೊಂದಿಗೆ, ಮಣಿಪಾಲದ ಶಾಂತಿನಗರದ ರಸ್ತೆಯ ಸನಿಹಗಳಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ, ಶನಿವಾರ ವನಮೋಹತ್ಸವ ಆಚರಿಸಿದರು.
ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ ಅವರು, ಭಾರತ ದೇಶದಲ್ಲಿರುವ ಜನಸಂಖ್ಯೆ ಅನುಗುಣವಾಗಿ 33 ಶೇಕಡದಷ್ಟು ಅರಣ್ಯವು ಉಸಿರಾಡಲು ಬೇಕಾಗಿದೆ. ಇವಾಗ ದೇಶದಲ್ಲಿ 17 ಶೇಕಡದಷ್ಟು ಅರಣ್ಯವು ಉಳಿದುಕೊಂಡಿದೆ. ಹೀಗೆ ಪರಿಸರ ನಾಶ ಮುಂದುವರೆದರೆ, ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಹುದು.
ಹಾಗಾಗಿ ಗಿಡಗಳು ನೆಡುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕೆಂದು ಹೇಳಿದರು. ಅತಿಥಿಯಾಗಿ ಉಪಸ್ಥಿತರಿದ್ದ ಮಲಬಾರ್ ಗೋಲ್ಡ್ ಆಬರಣ ಮಳಿಗೆಯ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್ ಅವರು, ಮುಂದಿನ ತಲೆಮಾರಿಗೆ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಒದಗಿಸ ಬೇಕೆಂದು ಕರೆ ನೀಡಿದರು. ನಾಗರಿಕ ಸಮಿತಿಯ ಸಂಚಾಲಕ ಒಳಕಾಡು ನಿತ್ಯಾನಂದ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.