ವಿಶ್ವ ಪರಿಸರ ದಿನಾಚರಣೆ ಮತ್ತು ~ವನಮಹೋತ್ಸವ

ಉಡುಪಿ :- ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವಣ೯ ಎಂಟರ್ ಪ್ರೆಸಸ್ , ರೋಟರಿ ರೋಯಲ್ ಬ್ರಹ್ಮಾವರ , ಕ.ಸಾ.ಪ ಉಡುಪಿ ತಾಲೂಕು ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾಯ೯ಕ್ರಮ ಜೂನ್ 5 ರಂದು ಸೋಮವಾರ ಡಾ| ಎ.ವಿ ಬಾಳಿಗಾ ಸಮೂಹ ಸಂಸ್ಥೆ ಆವರಣದಲ್ಲಿ ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಎ ಸುವಣ೯ , ಪರಿಸರ ಉಳಿದರೆ ನಾವು ಉಳಿಯಬಹುದು ವಿವಿಧ ಕಾರಣಗಳಿಂದ ಇಂದು ಪರಿಸರ ನಾಶ ವಿವಿಧ ಕಾರಣಗಳಿಂದ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವಷ೯ ಪೂತಿ೯ ಗಿಡ ನೆಡುವ ಕಾಯ೯ ನಡೆಯಬೇಕು ಎಂದರು.

ವೇದಿಕೆಯಲ್ಲಿ ಜಯಂಟ್ಸ್ ಫೆಡರೇಶಯನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ರೋಟರಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾಯ೯ದಶಿ೯ ಚರಣ್ ಶೆಟ್ಟಿ, ಜಯಂಟ್ಸ್ ಕಾಯ೯ದಶಿ ೯ ಮಿಲ್ಟನ್ ಒಲಿವೇರಾ, ದಯಾನಂದ ಪೂಜಾರಿ, ವನಿತಾ, ರೊನಾಲ್ಡ್, ಶ್ರೀನಾಥ್ ಕೋಟ, ಅರಣ್ಯ ಅಧಿಕಾರಿ ಹರೀಶ್, ಎ.ವಿ ಬಾಳಿಗಾ ಆಸ್ಪತ್ರೆಯ ಕರುಣಾಕರ್ ಮುಂತಾದವರು ಉಪಸ್ಥಿತರಿದ್ದರು. ಕಸಾಪ ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply