ಛಾಯಾಗ್ರಹಣ ಒಂದು ಕಲೆ ಮತ್ತು ವೃತ್ತಿ~ ಪ್ರಕಾಶ್ ಕೊಡಂಕೂರ್

ಛಾಯಾಗ್ರಹಣ ಎನ್ನುವುದು ಕೇವಲ ನೆನಪುಗಳನ್ನು ಸೆರೆಹಿಡಿಯುವ ಕೆಲಸವಲ್ಲ. ಅದೊಂದು ಅದ್ಬುತವಾದ ಕಲೆ. ಇಂದಿನ ದಿನಮಾನಗಳಲ್ಲಿ ಛಾಯಾಗ್ರಹಣಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪ್ಯಾನಾಸೋನಿಕ್ ಲುಮಿಕ್ಸ್‌ ಕಾರ‍್ಯಗಾರವನ್ನು ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರು ಚಾಲನೆ ನೀಡಿ ಮಾತನಾಡಿದರು. 

ಈ ಸಂದರ್ಭದಲ್ಲಿ ಎರಿಯಾ ಸೇಲ್ಸ್ ಮ್ಯಾನೇಜರ್ ಚೇತನ್, ಮೆಂಟರ್ ಗಳಾದ ರಘು, ಅಶೋಕ್, ದಿನೇಶ್ ಗೋಡೆ ಕುಂದಾಪುರ, ಸುರಭಿ ಸುಧೀರ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ವಂದಿಸಿದರು. ಛಾಯಾ ಕಾರ್ಯದರ್ಶಿ ಸಂದೀಪ್ ಕಾಮತ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply