ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ವತಿಯಿಂದ “ನೃತ್ಯಾರ್ಚನೆ” ಭರತನಾಟ್ಯ ಪ್ರಸ್ತುತಿ

ಪರ್ಯಾಯ ಶ್ರೀ ಕೃಷ್ಣಾಪುರ ಮಠ,ಶ್ರೀ ಕೃಷ್ಣ ಮಠ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿಯು “ನೃತ್ಯಾರ್ಚನೆ” ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ. ಅಂದಿನ ನೃತ್ಯ ಕಾರ್ಯಕ್ರಮವನ್ನು ಅಭಿಜ್ಞಾ ನೃತ್ಯ ಭೂಮಿಯ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ರಶ್ಮಿ ಗುರುಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮವು ಉಡುಪಿ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ದಿನಾಂಕ:30-7-2023 ಆಡಿತ್ಯವಾರದಂದು ಸಂಜೆ 6 ಗಂಟೆಗೆ ಆರಂಭವಾಗಲಿದೆ.

ಕಾರ್ಯಕ್ರಮ ಹಿಮ್ಮೇಳದಲ್ಲಿ ನಟುವಂಗ – ಹಾಡುಗಾರಿಕೆ – ನೃತ್ಯ ನಿರ್ದೇಶನ~ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದುಷಿ ಶ್ರೀಮತಿ ವೀಣಾ ಎಂ ಸಾಮಗ, ಮೃದಂಗದಲ್ಲಿ ಬಿ ಎಂ ಪೃಥ್ವಿರಾಜ್ ಸಾಮಗ ಹಾಗೂ ಪಿಟೀಲುನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ ಭಾಗವಹಿಸಲಿದ್ದಾರೆ.

 
 
 
 
 
 
 
 
 
 
 

Leave a Reply