ಬೈಂದೂರು : ಹಿರಿಯನಾಗರಿಕರ ಸಭೆ

ರೋಟರಿ ಬೈಂದೂರು ಮಾಜಿ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿಗಳು,ವೃತ್ತಿಯಲ್ಲಿ ಜೀವವಿಮಾ ಪ್ರತಿನಿಧಿಗಳಾಗಿರುವ ಮಂಜುನಾಥ ಮಹಾಲೆ ಉಪ್ಪುಂದ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿದರು. ಹಿರಿಯನಾಗರಿಕರು ಹಿರಿಯರಾಗಬೇಕು ವೃದ್ಧರಾಗಬಾರದು ಎಂದು ಕೆಲವು ಅರ್ಥಪೂರ್ಣ ನುಡಿಗಳನ್ನಾಡಿ, ಹಲವು ಉದಾಹರಣೆಗಳೊಂದಿಗೆ ಪರಚಲಿತ   ವಿದ್ಯಮಾನಗಳ ಕುರಿತು ಮಾತನಾಡಿ
ತಮ್ಮ ಜೀವನ ಶೈಲಿಯನ್ನು ಕಾಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಕೆ.ಪುಂಡಲೀಕ ನಾಯಕ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಆರಂಭದಲ್ಲಿ ನಿವೃತ್ತ ಶಿಕ್ಷಕ ಹೆಚ್ ವಾಸುದೇವ ಪ್ರಾರ್ಥಿಸಿದರು, ಕಾರ್ಯದರ್ಶಿ ಗೋವಿಂದ ಬಿಲ್ಲವರು ಗತಸಭೆಯ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರು ಸಂವಾದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ಉಪಾಧ್ಯಕ್ಷ ಎನ್ ಜಗನ್ನಾಥ ಶೆಟ್ಟಿಯವರು ಶುಭಕೋರಿದರು. ನಿಕಟ ಪೂರ್ವ ಅಧ್ಯಕ್ಷ ಎಮ್. ಗೋವಿಂದ ಅವರು
ಸಂದರ್ಭೋಚಿತ ನುಡಿಗಳನ್ನಾಡಿ ವಂದನಾರ್ಪಣೆ ಮಾಡಿದರು.
 
 
 
 
 
 
 
 
 
 
 

Leave a Reply