ಆದಿತ್ಯ ಟ್ರಸ್ಟ್ ನಕ್ರೆ, ವತಿಯಿಂದ ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ

ಆದಿತ್ಯ ಟ್ರಸ್ಟ್ (ರಿ ), ನಕ್ರೆ., ಕಾರ್ಕಳ ವತಿಯಿಂದ ವಿಕಲಚೇತನರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ.:- ಆದಿತ್ಯ ಟ್ರಸ್ಟ್ (ರಿ ) ನಕ್ರೆ ಕಾರ್ಕಳ ಮತ್ತು ಲಯನ್ಸ್ ಕ್ಲಬ್ ನಕ್ರೆ ಇವರ ಜಂಟಿ ಸಹಯೋಗದೊಂದಿಗೆ ದಿನಾಂಕ 18-07-2021ರಂದು ನಮನಪುರ ಅಂಗನವಾಡಿ ಕೇಂದ್ರ ನಕ್ರೆ ಇಲ್ಲಿ ವಿಕಲ ಚೇತನರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ನೆರವೇರಿತು. 
ಈ ಕಾರ್ಯಕ್ರಮದಲ್ಲಿ ಶ್ರೀ ಉದಯ ಕುಮಾರ್ ಹೆಗ್ಡೆ ಲಯನ್ಸ್ ಕ್ಲಬ್ ಅಧ್ಯಕ್ಷರು ಮುಖ್ಯ ಅತಿಥಿ ಆಗಿ ಆಗಮಿಸಿದ್ದರು.ಆದಿತ್ಯ ಟ್ರಸ್ಟ್ ವಿಕಲಚೇತನರಿಗಾಗಿ ಅಗತ್ಯವಾದ ದಿನಸಿ ಕಿಟ್ ವಿತರಿಸಿ ಉತ್ತಮ ಕಾರ್ಯ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುತ್ತಿರುವುದು ಶ್ಲಾಘನೀಯ. 
 
ಟ್ರಸ್ಟಿನ ಎಲ್ಲ ಕಾರ್ಯಕ್ರಮಗಳಿಗೂ ಲಯನ್ಸ್ ಕ್ಲಬ್ ಪೂರ್ಣ ಸಹಕಾರವನ್ನು ಕೊಡುತ್ತದೆ ಎಂದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಮಂಜುನಾಥ ತೆಂಕಿಲ್ಲಾಯ ಮಾತನಾಡುತ್ತ ವಿಕಲ ಚೇತನರಿಗೆ ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸುವುದು ಹಾಗು ಅವರನ್ನು ಒಂದುಗೂಡಿಸಿ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕವಾಗಿ ಸಬಲಗೊಳಿಸುವ ಗುರಿ ಇದೆ ಎಂದರು. 
 
ವೇದಿಕೆಯಲ್ಲಿ ಶ್ರೀ ಸೂರಜ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ನಕ್ರೆ, ಶ್ರೀ ಪ್ರಾಣೇಶ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಶೇಖರ ಸುವರ್ಣ ಗ್ರಾಮಪಂಚಾಯತ್ ಸದಸ್ಯರು, ಶ್ರೀ ಮಂಜುನಾಥ ತೆಂಕಿಲ್ಲಾಯ ಅಧ್ಯಕ್ಷರು ಆದಿತ್ಯ ಟ್ರಸ್ಟ್ ನಕ್ರೆ,ಶ್ರೀ ಐವನ್ ಮಿರಂಡ, ಶ್ರೀ ಸತೀಶ್ ಶೆಟ್ಟಿ, ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು ಸಹಕರಿಸಿದರು. ಶ್ರೀ ರಮೇಶ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply