ಭಾರತ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿ ವತಿಯಿಂದ ಎರಡು ದಿನಗಳ ಪರ್ಯಾಯ ಮಹೋತ್ಸವದಲ್ಲಿ ಹೊರೆಕಾಣಿಕೆ, ಸೇವಾ ಶಿಬಿರ ಕಾರ್ಯಕ್ರಮವಿದ್ದು, ನಮ್ಮ ಜಿಲ್ಲೆಯ ರೋವರ್ಸ್ ರೇಂಜರ್ಸ್ ಗಳು ಸುಮಾರು 90ಕ್ಕೂ ಹೆಚ್ಚು ಮಂದಿ ನಿಸ್ವಾರ್ಥ ಸೇವೆಯನ್ನು ಮಾಡಿ ಶ್ರೀಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗಿದ್ದಾರೆ.
ತರಬೇತಿ ಆಯುಕ್ತರಾದ ಆನಂದ್ ಬಿ ಅಡಿಗ, ರೋವರ್ ಸ್ಕೌಟ್ ಲೀಡರ್ ಆಗಿರುವ ವಿತೇಶ್ ಕಾಂಚನ್, ಹಾಗೂ ಕುಮಾರಿ ವಂದನ, ಕುಮಾರಿ ವಿಭಾ ಹಾಗೂ ಕಡಿಯಾಳಿ ಮುಕ್ತ ದಳದ ರೋವರ್ಸ್ ರೇಂಜರ್ಸ್ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿರುವವರು. ಜಿಲ್ಲಾ ASOC ಆಗಿರುವ ಶ್ರೀಮತಿ ಸುಮನ್ ಶೇಖರ್ ಕಾರ್ಯಕ್ರಮ ಸಂಘಟಿಸಿದ್ದರು.