ರೋಟರಿ ಸಹಾಯಕ ಗವರ್ನರ್ ಆಗಿ ಶಿರ್ವ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ

ಶಿರ್ವ:- ರೋಟರಿ ಅಂತಾರಾಷ್ಟ್ರೀಯ  ಜಿಲ್ಲೆ ೩೧೮೨ ವಲಯ ೫ರ ಸಹಾಯಕ ಗವರ್ನರ್ ಆಗಿ ಶಿರ್ವ ರೋಟರಿ ಪೂರ್ವಾಧ್ಯಕ್ಷ, ಶಿರ್ವ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆರವರನ್ನು  ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಶಿವಮೊಗ್ಗೆ ಇವರು ನಿಯೋಜಿ ಸಿದ್ದು, ಅವರು ಜುಲೈ ೧ ಗುರುವಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
 
ವಲಯ ತರಬೇತುದಾರರಾಗಿ ನಿಕಟಪೂರ್ವ ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರಪುರ, ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ, ವಲಯ ಸೇನಾನಿಗಳಾಗಿ ಅನಿಲ್ ಡೇಸಾ ಶಂಕರಪುರ, ಸುರೇಂದ್ರ ನಾಯಕ್ ಕಾರ್ಕಳ ಸಹಕರಿಸಲಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ, ಕಾರ್ಕಳ ರೋಕ್‌ಸಿಟಿ, ನಿಟ್ಟೆ, ಬೆಳ್ಮಣ್, ಪಡುಬಿದ್ರಿ, ಉಚ್ಚಿಲ, ಕಾಪು, ಮಣಿಪುರ, ಶಂಕರಪುರ ಮತ್ತು ಶಿರ್ವ ರೋಟರಿ ಕ್ಲಬ್‌ಗಳು ಇವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿವೆ.
 
 
 
 
 
 
 
 
 
 
 

Leave a Reply