ಪಡುಬಿದ್ರಿ ರೋಟರಿ ಕ್ಲಬ್ ಹಾಗು ರೋಟರಿ ಸಮುದಾಯದಳ( RCC)ದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ಚಿತ್ರಾಕ್ಷಿ ಯವರನ್ನು ಅವರ ಸ್ವಗೃಹದಲ್ಲಿ ಸಾನ್ಮಿಸಿ ಗೌರವಿಸಲಾಯಿತು…
ರೋಟರಿ ಅಧ್ಯಕ್ಷೆ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಪೂರ್ವ ಅಧ್ಯಕ್ಷ ರಾದ ಪಿ. ಕೃಷ್ಣ ಬಂಗೇರ , ರಮೀಜ್ ಹುಸೇನ್, ಸದಸ್ಯರಾದ ಸುನೀಲ್ ಕುಮಾರ್, ಪವನ್ ಸಾಲ್ಯಾನ್, ಪುಷ್ಪಲತಾ ಗಂಗಾಧರ್ , ಸಂತೋಷ್ ಪಡುಬಿದ್ರಿ ರೋಟರಿ ಸಮುದಾಯದಳ ಅಧ್ಯಕ್ಷೆ ದೀಪಾಶ್ರಿ ಕರ್ಕೇರ, ಕಾರ್ಯದರ್ಶಿ ತನಿಷಾ ಜಿ. ಕುಕ್ಯಾನ್ , ಸದಸ್ಯರಾದ ಅದ್ವಿತ್ ಕುಮಾರ್* ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷೆ ಗೀತಾ ಅರುಣ್ ಸ್ವಾಗತಿಸಿ.ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು. ಯಶೋಧ ಪಡುಬಿದ್ರಿ ನಿರೂಪಿಸಿದರು.