ರತ್ನ ಸಂಜೀವ ಕಲಾ ಮಂಡಲದ ಪ್ರಥಮ ವಾರ್ಷಿಕೋತ್ಸವ

ಶಿವ ಪ್ರೇರಣಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ರತ್ನ ಸಂಜೀವ ಕಲಾ ಮಂಡಲದ ಪ್ರಥಮ ವಾರ್ಷಿಕೋತ್ಸವವು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಹೇಶ್ ಠಾಕೂರ್ ರವರ ನೇತೃತ್ವದಲ್ಲಿ ಇದೇ ತಾರೀಖು 21.01.2024ರಂದು ಸಪನ್ನಗೊಂಡಿತು. ಮುಖ್ಯ ಅತಿಥಿಯಾಗಿ ಹಾಡು ಬಾ ಕೋಗಿಲೆ ಖ್ಯಾತಿಯ ಗಾಯಕಿ ಶ್ರೀಮತಿ ಕಲಾವತಿ ದಯಾನಂದ ಪುತ್ರನ್ ರವರು ಆಗಮಿಸಿದ್ದರು. ಶ್ರೀ ರಮಾನಂದ ಸಾಮಂತ್ ರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಸಂಸ್ಥೆಯನ್ನು ಒಂದು ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಿವಿಧ ಕಲಾ ಪ್ರಕಾರಗಳಾದ ಶಾಸ್ತ್ರೀಯ ಸಂಗೀತ, ಭಜನೆ, ಸುಗಮ ಸಂಗೀತ, ತಬಲಾ, ಹಾರ್ಮೋನಿಯಂ, ಚಿತ್ರಕಲೆಯ ವಿದ್ಯಾರ್ಥಿಗಳಿಂದ‌ ಕಲಾ ಪ್ರದರ್ಶನ ನಡೆಯಿತು. ಶಿಕ್ಷಕ ವರ್ಗದಲ್ಲಿ ಶ್ರೀಮತಿ ಉಷಾ ಹೆಬ್ಬಾರ್,ಶ್ರೀ ನಿತ್ಯಾನಂದ ನಾಯಕ್,ನಾಯಕ್, ಶ್ರೀ ಸೂರಜ್, ಶ್ರೀಮತಿ ಸುಮತಿ ಕಾಮತ್ ರವರು ಸಹಕರಿಸುತ್ತಿದ್ದಾರೆ. ಶ್ರೀಮತಿ ಲಾವಣ್ಯ ಹಾಗೂ ಶ್ರೀಮತಿ ಸಾವಿತ್ರಿಯವರ ನಿರಂತರ ಸಹಕಾರವನ್ನು ಸ್ಮರಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಈ ಎಲ್ಲಾ ಕಲಾ ಪ್ರಕಾರಗಳನ್ನು ಉಚಿತ ತರಬೇತಿ ಕೊಡುತ್ತಿರುವ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು. ಈ ಸಂಸ್ಥೆಯ ರೂವಾರಿ ಶ್ರೀಮತಿ ಅಶ್ವಿನಿ ಠಾಕೂರ್, ಶ್ರೀಮತಿ ಠಾಕೂರ್ ,ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಶ್ರೀಮತಿ ಸುಮತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply