ಬೆಳ್ಮಣ್ಣು ಜೇಸಿಐ ಘಟಕದ ನೇತೃತ್ವದಲ್ಲಿ ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ತರಬೇತಿ ಕಾಯ೯ಕ್ರಮ ನಡೆಯಿತು.
ತರಬೇತಿ ಕಾರ್ಯಾಗಾರವನ್ನು ವಲಯ ತರಬೇತುದಾರರಾದ ಜೇಸಿ. ರಾಘವೇಂದ್ರ ಪ್ರಭು ಕರ್ವಾಲು ಅವರು ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಟ್ಟರು.
ಘಟಕದ ಪೂರ್ವಾಧ್ಯಕ್ಷರಾದ ಜೇಸಿ. ಸತೀಶ್ ಕೋಟ್ಯಾನ್ ಹಾಗೂ ಜೇಸಿ. ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಜಿನರಾಜ್ ಸಿ. ಸಾಲ್ಯಾನ್ ಉದ್ಘಾಟಿಸಿದರು.
ಪೂರ್ವಾಧ್ಯಕ್ಷರಾದ ಜೇಸಿ. ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ಸದಸ್ಯರಾದ ಸುರೇಶ್ ಕಾಸ್ರಬೈಲು, ಕಾರ್ಯಕ್ರಮದ ನಿರ್ದೇಶಕರಾದ ಜೇಸಿ. ಲಿತಿಶಿಯಾ, ಲೇಡಿ ಜೇಸಿ ಸಂಯೋಜಕರಾದ ಜೇಸಿ. ಸೌಜನ್ಯ ಕೋಟ್ಯಾನ್, ಯುವ ಜೇಸಿ. ಅಧ್ಯಕ್ಷ ಜೇಜೇಸಿ. ಕೀರ್ತನ್ ಪೂಜಾರಿ ಭಾಗವಹಿಸಿದ್ದರು.