ಅರೂರು ಪುಣ್ಯಕೋಟಿ ಗೋಶಾಲೆಯಲ್ಲಿ ಗೋವಿಗಾಗಿ ಮೇವು ಅಭಿಯಾನ

ಉಡುಪಿ : ಗೋವಿಗಾಗಿ ಮೇವು ಅಭಿಯಾನಕ್ಕೆ ಬೆಂಬಲವಾಗಿ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ,ಶಿವಾನಿ ವಿಪ್ರಾ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು ನೇತ್ರತ್ವದಲ್ಲಿ ರಸ್ತೆಯ ಇಕ್ಕಡೆಗಳಲ್ಲಿ ಇರುವ ಹುಲ್ಲನ್ನು ಕಟಾವು ಮಾಡಿ ಅರೂರು ಪುಣ್ಯಕೋಟಿ ಗೋಶಾಲೆಗೆ ನೀಡಿದರು.

ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಬಿಲ್ಲಾಡಿ ಜಿಲ್ಲೆಯಲ್ಲಿ ಗೊವಿಗಾಗಿ ಮೇವು ಕೇವಲ ಒಂದು ಅಭಿಯಾನವಲ್ಲ ಇದೊಂದು ಯುವ ಸಮುದಾಯದ ಆಂದೋಲನವಾಗಿಲಿದೆ ಎಂದರು.

ಸಮೃದ್ಧಿ ಮಹಿಳಾ ಮಂಡಳಿಯ ಪ್ರಸನ್ನ ಪಿ ಭಟ್ ಮಾತನಾಡಿ ಗೋವಿಗಾಗಿ ಮೇವು ನಮ್ಮಂತ ಅದೆಷ್ಠೋ ಮಹಿಳೆಯರಿಗೆ ಪ್ರೇರಣೆ ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಗೋಮಾತೆಯ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.

ಅರೂರು ಗ್ರಾಮಪಂಚಾಯತ್ ಮಾಜಿ ಉಪಾದ್ಯಕ್ಷ ಗಣೇಶ್ ಕುಲಾಲ್ ಸಂಮ್ರಧ್ದಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ, ಶಿವಾನಿ ವಿಪ್ರಾ ಮಹೀಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು, ಪು.ಕೋ.ಗೋ. ಭಕ್ತಿ ಭೂಷಣ ದಾಸ್, ಪ್ರಸನ್ನ ಪಿ ಭಟ್, ಸಹನಾ ಕೆ ಹಬ್ಬಾರ್, ಮಲ್ಲಿಕಾ ಹರೀಶ್ ಶೆಟ್ಟಿ ಚೇರ್ಕಾಡಿ, ಗಣೇಶ ಕುಲಾಲ ಆರೂರು, ಹರಿದಾಸ ಠಾಕೂರ್,ಶೇಖರ ಕುಲಾಲ, ಸುಧೀರ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply