ಕಣ್ಣಿನ ತಪಾಸಣಾ ಶಿಬಿರ

ಸಮುದಾಯ ವೈಧ್ಯಕೀಯ ವಿಭಾಗ, ಕಣ್ಣಿನ ವಿಭಾಗ ಕೆ ಎಮ್ ಸಿ ಮಣಿಪಾಲ ಮತ್ತು ಲಯನ್ಸ್ ಕ್ಲಭ್ ಉಡುಪಿ ಇವರ ಸಹಯೋಗದಲ್ಲಿ ಸೇವಾ ಸಮೀಕ್ಷೆಯ ಸಲುವಾಗಿ ಮಣಿಪಾಲ ಆರೋಗ್ಯ ಕೇಂದ್ರ ಉದ್ಯಾವರ ಇಲ್ಲಿನ ಫಲಾನುಭವಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಭ್ ಗವರ್ನರ್ ಡಾ ನೇರಿ ಕರ್ನೇಲಿಯೋ ಲಯನ್ಸ್ ಕ್ಲಭ್‌ನ ಅಧ್ಯಕ್ಷ ರವೀಶ್ ಚಂದ್ರ ಶೆಟ್ಟಿ ಲಯನ್ಸ್ ಕ್ಲಭ್‌ನ ಕಾರ್ಯದರ್ಶಿ ವಿಜಯಕುಮಾರ್ ಮುದ್ರಾಡಿ ಕ್ಲಭ್‌ನ ಇತರ ಸದಸ್ಯರು ಹಾಜರಿದ್ದರು.

ಸಮುದಾಯ ವೈಧ್ಯಕೀಯ ವಿಭಾಗದ ಅಸೋಸಿಯೇಟ್ ಪ್ರೋಫೆಸರ್ ಡಾ. ಸಂಜಯ್ ಕಿಣಿ ಕಣ್ಣಿನ ವಿಭಾಗದ ಡಾ.ನಿಹಿತ್ ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಶ್ರೀಮತಿ ಮಾಲತಿ ಸಾಲಿಯಾನ್, ರಿಯಾಜ್ ಪಳ್ಳಿ, ಗಿರೀಶ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಸಮುದಾಯ ವೈಧ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಮಾರ್ಗದರ್ಶನದಲ್ಲಿ, ಡಾ.ಸ್ನೇಹಾ ಡಿ. ಮಲ್ಯ ಸಹಕಾರದೊಂದಿಗೆ ನಡೆಯಿತು.

ಸಮಾಜ ಸೇವಕಿ ನೀಲಾವತಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply