ದೊಂಡೇರಂಗಡಿ ಶ್ರೀ ರಾಮ ಮಂದಿರದಲ್ಲಿ ಭಕ್ತರಿಗೆ ಲಾಡು ವಿತರಣೆ

ಉಡುಪಿ ; ಹರಿಖಂಡಿಗೆ ಸಮೀಪದ ದೊಂಡೇರಂಗಡಿ ಶ್ರೀ ರಾಮ ಮಂದಿರದಲ್ಲಿ 33 ನೇ ಪುನರ್ ಪ್ರತಿಷ್ಠಾ ವರ್ಧಂತಿ ಹಾಗು 128 ನೇ ಭಜನಾ ಮಂಗಲೋತ್ಸವು ಶನಿವಾರ ಮುಂಜಾನೆ 8 ರಿಂದ ಭಜನೆ ಆರಂಭ ಗೊಂಡು ಊರ ಪರಊರ ಸಂತ ಮಂಡಳಿಗಳಿಂದ ಅಹೋ ರಾತ್ರಿ ಏಕಾಹ ಭಜನೆ ನೆಡೆಸಿ, ರಾತ್ರಿ ರಂಗ ಪೂಜೆ, ದೀಪಾರಾಧನೆ ನೆಡೆಯಿತು.

ಆದಿತ್ಯವಾರ 128 ನೇ ಭಜನಾ ಮಂಗಲೋತ್ಸವ ಅಂಗವಾಗಿ ಶ್ರೀ ರಾಮ ದೇವರಿಗೆ ವಿಶೇಷ ಹೂವಿನ ಅಲಂಕಾರ, ನೂರಾರು ಭಕ್ತರಿಂದ ವಿವಿಧ ಬಗೆಯ ಹರಕೆ ರೊಪವಾಗಿ ಸಂತಾನ ಭಾಗ್ಯ, ವಿವಾಹ, ಗ್ರಹ ನಿರ್ಮಾಣ, ಕಷ್ಟ -ನಷ್ಟ ಗಳಿಂದ ದೇವರಿಗೆ ಹರಕೆ ಹೇಳಿಕೊಂಡು ತಮ್ಮ ಅಸೆ ಬಯಕೆ ಈಡೇರಿದ ಬಳಿಕ ನೂರಾರು ಭಕ್ತರಿಂದ ಸಾವಿರಾರು ಲಾಡುಗಳನ್ನು ಶ್ರೀ ರಾಮ ದೇವರಿಗೆ ಅರ್ಪಿಸುತ್ತಾರೆ ಮಧ್ಯಾಹ್ನ ಮಹಾ ಪೂಜೆ ಬಳಿಕ ಭೋಜನ ಸಮಯದಲ್ಲಿ ಸಾವಿರಾರು ಭಕ್ತರಿಗೆ ಪ್ರಸಾದ ರೊಪದಲ್ಲಿ ಲಾಡು ವಿತರಣೆ ಮಾಡಲಾಯಿತು

ದೇವಳದ ಪ್ರಧಾನ ಅರ್ಚಕರಾದ ಕಾಶೀನಾಥ್ ಭಟ್ ಕಲ್ಯಾಣಪುರ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು , ರಾಮಮಂದಿರದ ಅಧ್ಯಕ್ಷರಾದ ಜಯರಾಮ ನಾಯಕ್, ಮಹೇಶ ಭಟ್, ರಾಘವೇಂದ್ರ ಕಿಣೆ , ಗಣೇಶ ಶೆಣೈ , ಸಂದೀಪ ಶೆಣೈ , ಜಿ ಎಸ್ ಬಿ ಯುವಕ, ಮತ್ತು ಮಹಿಳಾ ಮಂಡಳಿಯ ಸದ್ಯಸರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply