ಎಸ್ ಕೆಪಿಎ ಬಂಟ್ವಾಳ ವಲಯದ ವತಿಯಿಂದ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ಬಂಟ್ವಾಳ ವಲಯದ ವತಿಯಿಂದ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ವಲಯಾಧ್ಯಕ್ಷ ಶ್ರೀ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. 
ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಛಾಯಾಗ್ರಾಹಕ ವಿಟ್ಲದ ಶೆಟ್ಟಿ ಸ್ಟುಡಿಯೋದ ಶ್ರೀ ಜನಾರ್ದನ ಶೆಟ್ಟಿ ದಂಪತಿಯವರನ್ನು ಬಿ.ಸಿ. ರೋಡಿನ ಪ್ರೀತಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ಸನ್ಮಾನಿಸಲಾಯಿತು. 
ಜಿಲ್ಲಾ ಕೋಶಾಧಿಕಾರಿ ಆನಂದ್ ಎನ್ ಪ್ರಸ್ತಾವಿಸಿ, ವಲಯ ಕೋಶಾಧಿಕಾರಿ ವಿಕ್ರಂ ರವರು ಸ್ವಾಗತಿಸಿ, ವಲಯ ಪ್ರಧಾನ ಕಾರ್ಯದರ್ಶಿ ವಿಕೇಶ್ ರವರು ವಂದಿಸಿದರು. SKP ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಹರೀಶ್ ರಾವ್, ಮಾಜಿ ವಲಯಾಧ್ಯಕ್ಷ ಸತೀಶ್ ಕುಮಾರ್, ದಯಾನಂದ್ ಬಂಟ್ವಾಳ್, ಹರೀಶ್ ಮಾಣಿ, ವಲಯ ಉಪಾಧ್ಯಕ್ಷ ಹರೀಶ್ ನಾಟಿ, ಕಿಶೋರ್, ರೋಶನ್,  ಜನಾರ್ಧನ ಶೆಟ್ಟಿ ಅವರ ಪುತ್ರ, ವಲಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply