ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ವತಿಯಿಂದ 2 ಮನೆಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ : ನಗರದ ಕಕ್ಕುಂಜೆ ವಾರ್ಡಿನ ಲಕ್ಷ್ಮಣ ದೇವಾಡಿಗ ಮತ್ತು ಮೂಡು ಪೆರಂಪಳ್ಳಿ ವಾರ್ಡಿನ ಶಾಂತಿ ಮನೆಗಳಿಗೆ ಆಸರೆ ಚಾರಿಟೇಬಲ್ ಟ್ರಸ್ಟ್( ರಿ) ಕಡಿಯಾಳಿ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನೀಡಲಾಯತು.

ಈ ಉಚಿತ ವಿದ್ಯುತ್ ಸಂಪರ್ಕದ ದಾನಿಯಾದ ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಮಂಗಳೂರಿನ ಉಪಾಧ್ಯಕ್ಷ ಕಾಮ್ರೇಡ್ ರಘುರಾಮ ಕೃಷ್ಣ ಬಲ್ಲಾಳ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಯೂನಿಯನ್ನ ಮಂಗಳೂರು ವಲಯದ ಸಹಕಾರ್ಯದರ್ಶಿ ಹೆರಲ್ಡ್ ಡಿಸೋಜ ,ಉಡುಪಿ ವಲಯ ಕಾರ್ಯದರ್ಶಿ ಕಾಮ್ರೆಡ್ ನಾಗೇಶ್ ನಾಯಕ್, ಪ್ರದೇಶ ಕಾರ್ಯದರ್ಶಿ ಕಾಮ್ರೆಡ್ ಮನೋಜ್ ಕುಮಾರ್, ಕಾಮ್ರೆಡ್ ರಮೇಶ್ ಭಾಗವಹಿಸಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ , ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಸ್ವಾಗತಿಸಿ ಟ್ರಸ್ಟಿನ ಕೋಶಧಿಕಾರಿ ಸತೀಶ್ ಕುಲಾಲ್ ವಂದಿಸಿದರು. ಸ್ಥಳೀಯ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಗಿರಿಧರ ಆಚಾರ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಿಶೋರ್ ಕರಂಬಳ್ಳಿ ಮತ್ತು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿಯ ಸದಸ್ಯ ರಾಕೇಶ್ ಜೋಗಿ ಉಪಸ್ಥಿತರಿದ್ದರು.

ಈ 2 ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಮಹಿಷಮರ್ದಿನಿ ಎಲೆಕ್ಟ್ರಿಕಲ್ ನ ಅಶ್ವತ ದೇವಾಡಿಗ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply