ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಅಲೆವೂರು ಗುಡ್ಡೆ ಅಂಗಡಿಯಲ್ಲಿರುವ ಗಣೇಶೋತ್ಸವ ಸಮಿತಿಯ ಸಂಕಲ್ಪ ಸಭಾಂಗಣದ ಮುಂಭಾಗಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣದ ಗುದ್ದಲಿ ಪೂಜೆಯನ್ನು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ಅಂಚನ್ ನೆರವೇರಿಸಿದರು.
ಸುಮಾರು 5 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯಲಿದೆ. ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿ ರಾಘವೇಂದ್ರ ಭಟ್ ಸತ್ಯನಾರಾಯಣ ಪೂಜೆಯನ್ನು ನಡೆಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರು, ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಹರೀಶ್ ಕಿಣಿ , ಹರೀಶ್ ಸೇರಿಗಾರ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರೂಪೇಶ್ ಆಚಾರ್ಯ, ಕಾರ್ಯದರ್ಶಿ ರಂಜಿತ್ ನಾಯಕ್, ಗೌರವಾಧ್ಯಕ್ಷ ಶೇಖರ್ ಕಲ್ಮಾಡಿ ಉಪಸ್ಥಿತರಿದ್ದರು