ಅಲೆವೂರು ಗಣೇಶೋತ್ಸವ ಸಮಿತಿಯ ಸಂಕಲ್ಪ ಸಭಾಂಗಣದ ಮುಂಭಾಗಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣ ಕಾಮಗಾರಿಯ ಗುದ್ದಲಿ ಪೂಜೆ

ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಅಲೆವೂರು ಗುಡ್ಡೆ ಅಂಗಡಿಯಲ್ಲಿರುವ ಗಣೇಶೋತ್ಸವ ಸಮಿತಿಯ ಸಂಕಲ್ಪ ಸಭಾಂಗಣದ ಮುಂಭಾಗಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣದ ಗುದ್ದಲಿ ಪೂಜೆಯನ್ನು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ಅಂಚನ್ ನೆರವೇರಿಸಿದರು. 
 ಸುಮಾರು 5 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯಲಿದೆ.  ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿ ರಾಘವೇಂದ್ರ ಭಟ್ ಸತ್ಯನಾರಾಯಣ ಪೂಜೆಯನ್ನು ನಡೆಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. 
 ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸುಧಾಕರ್ ಪೂಜಾರಿ,  ಪಂಚಾಯತ್ ಸದಸ್ಯರುಗಳಾದ ಯತೀಶ್ ಕುಮಾರ್,  ಜಲೇಶ್ ಶೆಟ್ಟಿ,  ಪ್ರಶಾಂತ ಆಚಾರ್ಯ,  ಶಬರೀಶ್,  ರೂಪೇಶ್ ದೇವಾಡಿಗ,  ದುಂಡಪ್ಪ ಬಿದರಿ,  ಶಾಮಲಾ ಸುಧಾಕರ್.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರು,  ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಹರೀಶ್ ಕಿಣಿ ,  ಹರೀಶ್ ಸೇರಿಗಾರ್,  ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರೂಪೇಶ್ ಆಚಾರ್ಯ,  ಕಾರ್ಯದರ್ಶಿ ರಂಜಿತ್ ನಾಯಕ್,  ಗೌರವಾಧ್ಯಕ್ಷ ಶೇಖರ್ ಕಲ್ಮಾಡಿ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply