ಮಾದರಿ ಜನಪ್ರತಿನಿಧಿ ಕೊಡವೂರಿಗೆ ಬಹರೈನ್ ಬಿಲ್ಲವರಿಂದ ಗೌರವಾರ್ಪಣೆ

ಬಹರೈನ್ ನಡೆದ ಬಿಲ್ಲವರ ಸಂಘದ 20ನೇ ವರ್ಷ ಆಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಮಿಂಚಿದಂತಹ ಸಾಧಕರನ್ನು ಗೌರವಿಸುವಂತಹ ಕಾರ್ಯಕ್ರಮವು ಬಹರೈನ್ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಉಡುಪಿ ನಗರಸಭೆಯಲ್ಲಿ ಒಂದಾಗಿರುವ ಕೊಡವೂರು ವಾರ್ಡಿನ ನಗರಸಭಾ ಸದಸ್ಯರನ್ನು ಗೌರವಿಸುವ ಕಾರ್ಯವು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಹರೈನ್ ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಕೊಡವೂರು ಮಾತನಾಡಿ ಕೊಡವೂರು ವಾರ್ಡ್ ಒಂದು ಮಾದರಿ ವಾರ್ಡ್ ಆಗಿದೆ ಕಾರಣ ಅಲ್ಲಿಯ ಜನಪ್ರತಿನಿಧಿಯಾದ ವಿಜಯ್ ಕೊಡವೂರು ಮತ್ತು ಅಲ್ಲಿಯ ಕಾರ್ಯಕರ್ತರ ಗುಂಪು ಕೊಡವೂರಿನ ಎಲ್ಲಾ ಮನೆಗಳನ್ನು ಸರ್ವೆ ನಡೆಸಿ ಸ್ವಾವಲಂಬಿ ಗ್ರಾಮವನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ 17 ಸಮಿತಿಗಳನ್ನು ರಚಿಸಿ ಸ್ವಾವಲಂಬಿ ಮಾದರಿ ಮಾಡುವ ಕಾರ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಆದ್ದರಿಂದ ಕೊಡವೂರು ವಾರ್ಡಿನ ಕಾರ್ಯಗಳನ್ನು ಗುರುತಿಸಿ ಬಿಲ್ಲವ ಸಂಘದ ವತಿಯಿಂದ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಇವರನ್ನು ಗೌರವಿಸುತ್ತಿದೆ ಎಂದು ತಿಳಿಸಿದರು. ಇದೇ ರೀತಿ ಎಲ್ಲಾ ಗ್ರಾಮಗಳಲ್ಲೂ ಎಲ್ಲಾ ವಾರ್ಡ್ ಗಳಲ್ಲೂ ಮಾಡಿದರೆ ನಮ್ಮ ದೇಶ ಪರಮ ವೈಭವ ಸ್ಥಿತಿಗೆ ಹೋಗುವುದು ಹಾಗೂ ವಿಶ್ವದಲ್ಲಿಯೇ ನಂಬರ್ ಒನ್ ಆಗಲು ಸಾಧ್ಯತೆ ಇದೆ ಮತ್ತು ಮೋದಿಯ ಯೋಚನೆ ಯೋಜನೆಗಳು ಸಹಕಾರವಾಗುತ್ತದೆ ಎಂದು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ್ ಕೊಡವೂರು ತಿಳಿಸಿದರು.

 
 
 
 
 
 
 
 
 
 
 

Leave a Reply