ಉದ್ಯಾವರ ವೇದಮೂರ್ತಿ ಸುಜಯ ಆಚಾರ್ಯರಿಗೆ ಅಭಿನಂದನೆ  

ಉಡುಪಿ ಸಮೀಪದ   ಶ್ರೀ ಲಕ್ಷ್ಮೀ ನರಸಿಂಹ  ದೇವಳದಲ್ಲಿ ಪ್ರಧಾನ ಅರ್ಚಕರಾಗಿ  ನಿರಂತರವಾಗಿ  ಸುಮಾರು 50  ವರ್ಷಗಳ  ಕಾಲ ( ಸುವರ್ಣ ಪೂಜಾ ಸೇವಾ ಮೊಹೋತ್ಸವ )  ಪೂಜೆಯ  ಸೇವೆ  ಸಲ್ಲಿಸಿದ  ಇವರನ್ನು ದೇವಾಲಯ ಸಭಾ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
 ಶ್ರೀ ದೇವರ ಸನ್ನಿಧಿಯಲ್ಲಿ  ವಿಶೇಷ  ಹೂವಿನ ಅಲಂಕಾರ, ಸಾಮೂಹಿಕ ಪ್ರಾಥನೆ, ಗಣಹೋಮ, ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಮಂಡಳಿಯ ವತಿಯಿಂದ ಮುಂಜಾನೆಯಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ, ಮಹಾ ಪೂಜೆ  ದರ್ಶನ ಸೇವೆ -ಪ್ರಸಾದ ವಿತರಣೆ, ಸಾರ್ವಜನಿಕ  ಅನ್ನಸಂತರ್ಪಣೆ  ಹಾಗೂ  ಭಾರತನಾಟ್ಯ ಕಾರ್ಯಕ್ರಮ  ನೆಡೆಯಿತು.                                                                                                                                         ಧಾರ್ಮಿಕ ಸಭೆಯಲ್ಲಿ  ವೇದ ಮೂರ್ತಿ  ಗಣೇಶ್ ಭಟ್ ಕಾಪು, ವೇದಮೂರ್ತಿ ಕಮಲಾಕ್ಷ ಭಟ್  ಕಾಪು,  ವೇದಮೂರ್ತಿ ರವೀಂದ್ರ ಭಟ್  ಶಿರ್ವ,   ದರ್ಶನ ಪಾತ್ರಿ ಕೆ.ರಮೇಶ ಕಾಮತ್ ,  ದೇವಳದ ಆಡಳಿತ ಮೊಕ್ತೇಸರಾದ ರಾಮದಾಸ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ಕಾಮತ್, ವೆಂಕಟೇಶ ಕಾಮತ್, ನರಹರಿ ಕಾಮತ್, ವಿಠ್ಠಲದಾಸ ಕಾಮತ್, ಅನಂತ ಕಾಮತ್ , ಪ್ರದೀಪ್ ಕಾಮತ್, ವಸಂತ ಕಾಮತ್, ಪದ್ಮನಾಭ ಕಾಮತ್, ವಾಸುದೇವ ಕಾಮತ್,   ಜಿ ಎಸ್ ಬಿ  ಮಹಿಳಾ / ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply