ಕಲ್ಕೂರ ಪ್ರತಿಷ್ಠಾನ ಮಂಗಳೂರು ಕೊಡಮಾಡುವ ವಿಶ್ವೇಶ ತೀರ್ಥ ಜೀವಮಾನ ಸಾಧನಾ ಪ್ರಶಸ್ತಿ ಕುಂಜಿಬೆಟ್ಟಿನ ಪ್ರತಿಭಾ ಜ್ಞಾನ ಭಂಡಾರದ ಪ್ರತಿಭಾ ಎಸ್ ಆಚಾರ್ಯ ಇವರಿಗೆ ಲಭಿಸಿರುತ್ತದೆ.
ಹವ್ಯಾಸಿ ಲೇಖಕಿಯಾಗಿ, ಅಂಕಣಗಾರ್ತಿಯಾಗಿ, ಕವಿಯತ್ರಿಯಾಗಿ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಿರಿಯ ಸಾಧಕಿ ಪ್ರತಿಭಾ ಎಸ್ ಆಚಾರ್ಯ ಕುಂಜಿಬೆಟ್ಟು. ಮಣಿಪಾಲದ ಉದಯವಾಣಿಯಲ್ಲಿ ಪ್ರೂಫ್ ರೀಡರ್ ಹುದ್ದೆಯಲ್ಲಿದ್ದ ದಿ. ಸುಬ್ರಹ್ಮಣ್ಯ ಆಚಾರ್ಯರ ಪತ್ನಿಯಾಗಿದ್ದು, ಸಂಸ್ಕೃತ ಕಾಲೇಜು ಉಡುಪಿಯಲ್ಲಿ ಜ್ಯೋತಿಷ್ಯ ವಿದ್ವಾಂಸರಾಗಿದ್ದ ರಾಮಕೃಷ್ಣ ಆಚಾರ್ಯರ ಮಗಳು.
ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣ ಬರಹಗಳು, ಕರ್ಮವೀರ, ತುಷಾರ ಪತ್ರಿಕೆಗಳಲ್ಲಿ ಕೆಲವು ಸಾರ್ವಕಾಲಿಕ ಲೇಖನ ಗಳು, ತ್ರಿಕರ್ಣೇಶ್ವರಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕುಗಳು ಹಾಗೂ ಕವನ ವಾಚನ ನಡೆಸಿದ್ದಾರೆ. ಕಂಪ್ಯೂಟರ್ ನಲ್ಲಿ ಕನ್ನಡ,ಇಂಗ್ಲಿಷ್, ಹಿಂದಿ ಹಾಗೂ ಸಂಸ್ಕೃತ ಬೆರಳಚ್ಚು ವಿನಲ್ಲಿ ಪರಿಣಿತೆ.
ಇತ್ತೀಚಿಗೆ ಅಂಬಲಪಾಡಿ ಭವಾನಿ ಮಂಟಪದಲ್ಲಿ ನಡೆದ ಉಡುಪಿ ತಾಲೂಕು ಘಟಕದ ಸಾಹಿತ್ಯ ಸಮ್ಮೇಳನದಲ್ಲಿ ವಿಶಿಷ್ಟ ಪುರಸ್ಕಾರ ಪಡೆದಿರುತ್ತಾರೆ. ಮನೆಯಲ್ಲಿ ಪ್ರತಿಭಾ ಜ್ಞಾನ ಭಂಡಾರ ಸುಮಾರು 5೦೦೦ ಪುಸ್ತಕಗಳಿರುವ ಗ್ರಂಥಾಲಯವಿದೆ.