ಜೇಸಿಐ ವಲಯ ಸಮ್ಮೇಳನದಲ್ಲಿ ಕೊಡುವ ಸಾಧನಶ್ರೀ ಪ್ರಶಸ್ತಿಯು ವಲಯ 15 ರ ವಲಯ ಸಮ್ಮೇಳನದಲ್ಲಿ ಜೇಸಿಐ ಬಂಟ್ವಾಳದ ಆಥಿತ್ಯದಲ್ಲಿ ಬಂಟರ ಭವನದಲ್ಲಿ ಆದಿತ್ಯವಾರ ದಂದು ನೆಡೆಯಿತು.
ಜೇಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಘಟಕದ ಜೇಸಿ ಪ್ರವೀಣ್ ಕುಮಾರ್ ಅವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾ ಯಿತು. ಈ ಸಂದರ್ಭದಲ್ಲಿ ಜೇಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಘಟಕದ ಅಧ್ಯಕ್ಷ ಜೇಸಿ ಶ್ರೀಕಾಂತ್ ಭಟ್ಟ ,ಸ್ಥಾಪಕಾಧ್ಯಕ್ಷ ಜೇಸಿ ವಡ್ಡರ್ಸೆ ಸಚ್ಚಿದಾನಂದ ಅಡಿಗ, ಉಪಾಧ್ಯಕ್ಷರಾದ ಜೇಸಿ ಪದ್ಮನಾಭ ಆಚಾರ್ , ಜೇಸಿ ಸುಶಾಂತ್ ಶೆಟ್ಟಿ ಅಚ್ಲಾಡಿ ಹಾಗೂ ಸದಸ್ಯ ಜೇಸಿ ಪೂನಿತ್ ಪೂಜಾರಿ ಉಪಸ್ಥಿತರಿದ್ದರು.