“ಯೋಗಕ್ಷೇಮಂವಹಾಮ್ಯಹಂ ಎಂದು ಶ್ರೀ ಕೃಷ್ಣನು ಹೇಳಿದಂತೆ ಭಗವಂತನು ಪ್ರತಿಯೊಬ್ಬನಿಗೂ ಯೋಗ-ಕ್ಷೇಮವನ್ನು ಕರುಣಿಸುತ್ತಾನೆ. ಭಾರತ ಜಗತ್ತಿಗೆ ಯೋಗವನ್ನು ದಯಪಾಲಿಸಿದೆ. ಜಾಗತಿಕ ವಾಗಿ ಯೋಗದ ಮಹತ್ವ ಗೊತ್ತಾಗಿದ್ದು,‘ ವಿಶ್ವಯೋಗ ದಿನಾಚರಣೆ’ಯಾಗಿ ಆಚರಿಸಲು ಸಾಧ್ಯ ವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವ ರಿಂದ.
ಜಗತ್ತು ತನಗೆ ಆರೋಗ್ಯ ಬೇಕು, ಕ್ಷೇಮ ಬೇಕು ಅಂತ ಬಯಸಿತೋ ಆಗ ಯೋಗವನ್ನು ಒಪ್ಪಿ ಕೊಂಡಿತು. ಯೋಗದ ಮಹತ್ವದ ಅರಿವು ಜನರಿಗೆ ಬರಲು ಈಗಂತೂ ಭಯಾನಕವಾದ ಜಾಗತಿಕ ವಾಗಿ ಎಲ್ಲರನ್ನೂ ಕಾಡಿದ ಕೊರೊನ ಕಾರಣವಾಯಿತು. ಎಂದು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿ ಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಆಶೀರ್ವದಿಸುತ್ತಾ“ ನಮ್ಮ ದೇಶಕ್ಕೆ ಯೋಗ ಎಂಬ ಔಷಧಿಯನ್ನು ಋಷಿಮುನಿಗಳು ಕೊಟ್ಟಿರುತ್ತಾರೆ. ಯೋಗ ಅವಧಿ ಮುಗಿಯದ ಔಷಧಿ; ಅನೂರ್ಜಿತಗೊಳ್ಳುವುದಿಲ್ಲ. ಇದನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಅವಧಿ ರಹಿತವಾಗಿ ಜೀವಿಸಬೇಕು.
ಪ್ರಾತ್ಯಕ್ಷಿಕೆಯೊಂದಿಗೆ ಆಶಯ ಮಾತುಗಳನ್ನಾಡಿದ ಯೋಗ ಗುರು ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಿದ್ಧಾಪುರ ರವರು“ ಯೋಗ ಎಂದರೆ ಕೇವಲ ಆಸನ, ಪ್ರಾಣಾಯಾಮ ಹಾಗೂ ಧ್ಯಾನಗಳಷ್ಟೇ ಅಲ್ಲ. ಆಧ್ಯಾತ್ಮ ಯೋಗದಲ್ಲಿ ಅಷ್ಟಾಂಗಗಳಿವೆ. ಸಮಾಧಿ ಎಂಟನೆಯ ಸ್ಥಿತಿ. ಆದರೆ ಪ್ರಸ್ತುತ ಸಮಾಜದ ಆರೋಗ್ಯದ ದೃಷ್ಟಿಯಿಂದ ಆಸನ, ಪ್ರಾಣಯಾಮ ಹಾಗೂ ಧ್ಯಾನಗಳಿಗೆ ಪ್ರಾಮುಖ್ಯ ಕೊಡಬೇಕಾಗಿದೆ. ಆಸನ ಹಾಗೂ ಪ್ರಾಣಾಯಾಮಗಳನ್ನು ಹಂತ ಹಂತ ವಾಗಿ ಗುರು ಮುಖೇನ ಅಭ್ಯಸಿಸಬೇಕು.
ದೇಹ ಹಾಗೂ ಶ್ವಾಸಕೋಶಗಳು ಅದಕ್ಕೆ ಹೊಂದಿಕೊಳ್ಳಲು ಸಮಯಾವಕಾಶ ಬೇಕಾಗಬಹುದು. ಅಲ್ಲಿಯ ತನಕ ತಾಳ್ಮೆಯಿಂದ ಅಭ್ಯಸಿಸಬೇಕು. ಆಸನಗಳನ್ನು ಮಾಡುವಾಗ ಉಸಿರಾಟದ ಕಡೆ ಗಮನವಿರಬೇಕು. ಈ ಮೂಲಕ ಮನಸ್ಸಿನ ನಿಯಂತ್ರಣ ಸಾಧ್ಯ.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ಕಚೇರಿ ಸಿಬ್ಬಂದಿಗಳು ಭೌತಿಕವಾಗಿ ಭಾಗವಹಿಸಿದರು. ಆನ್ಲೈನ್ನಲ್ಲಿ ಇನ್ನೂರಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡರು. ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನಂದ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ಸ್ವಾಗತಿಸಿದರು. ಸುಧಾಕರ್ ರವರು ತಾಂತ್ರಿಕವಾಗಿ ಸಹಕರಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.