ಕೋವಿಡ್ ಯುದ್ಧದಂತಹ ಸಾಂಕ್ರಾಮಿಕ ಸಮಯದಲ್ಲಿ ಇಂತಹ ಜನಹಿತ ಉತ್ತಮ ಕಾಯಕವನ್ನು ನಡೆಸಿ, ಅಸಹಾಯಕ ಜನತೆಯ ಸೇವೆ ಮಾಡಿದ್ದು ತಮ್ಮಂತಹ ಸಹೃದಯಿಗಳಿಂದ ಮತ್ತಷ್ಟು ಉತ್ತಮ ಸೇವಾಕಾರ್ಯ ಇನ್ನೂ ಚೆನ್ನಾಗಿ ನಡೆಯಲಿ. ನಾವು ಸಮಾಜಕ್ಕೆ ನೀಡಿದರೆ, ಸಮಾಜ ನಮಗೆ ವಿಶೇಷ ಗೌರವವಾಗಿ ವರ ಕೊಡಬಲ್ಲದು ಎಂದು ಆಯುಕ್ತೆ ಅಲ್ಕಾ ಸಸಾನೆ ಆಶಯ ವ್ಯಕ್ತಪಡಿಸಿದರು.
ಉಡುಪಿ ಉದ್ಯಾವರದ ಬೋಳಾರಗುಡೆ ಜಿಲ್ಲು ಪೂಜಾರಿ ಮತ್ತು ರಾಜೀವಿ ಸಾಲ್ಯಾನ್ ದಂಪತಿ ಸುಪುತ್ರರಾದ ಶೇಖರ್ ಸಾಲಿಯಾನ್ ಸಾಂತಕ್ರೂಜ್ ಪರಿಸರದ ಹಿರಿಯ ಸಮಾಜ ಸೇವಕರಾಗಿದ್ದು ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಮತ್ತು ಪ್ರಭಾತ್ ಕಾಲೋನಿ ಗಣೇಶೋತ್ಸವ ಮಂಡಲ ಇದರ ಅಧ್ಯಕ್ಷ ಆಗಿರುವರು. ಪ್ರಭಾತ್ ಕಾಲೋನಿಯಲ್ಲಿನ ಪೇಜಾವರ ಮಠದ ಸೇವೆಗಳಲ್ಲೂ ತನ್ನನ್ನು ತೊಡಗಿಸಿ ಕೊಂಡಿದ್ದಾರೆ.