ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಪ್ರಶಂಸಾಪತ್ರಕ್ಕೆ ಭಾಜನರಾದ ಶೇಖರ ಜೆ.ಸಾಲಿಯಾನ್ ಸಾಂತಕ್ರೂಜ್

ಮುಂಬಯಿ ​: ಸಾಂತಾಕ್ರೂಜ್ ನ ಹಿರಿಯ ಸಮಾಜ​ ಸೇವಕ ಶೇಖರ ಸಾಲಿಯಾನ್ ಇವರ ಸತತಪ್ರಯತ್ನದಿಂದ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಯೋಗ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ​ ಕೊರೋನಾ ಸಂಕಷ್ಟದ ಲಾಕ್‌ಡೌನ್ ಸಮಯದಲ್ಲಿ ವಸತಿ​ ವ್ಯವಸ್ಥೆಯಿಲ್ಲದ ನಿರ್ಗತಿಕ ಮತ್ತು ಕಡು ಬಡಜನರಿಗೆ​ ದೈನಂದಿನವಾಗಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ​ (ಬಿಎಂಸಿ) ಮೂಲಕ ಆಹಾರ ಪೂರೈಸಿ ಅನುಪಮ ಸೇವೆಗೈದ​ ಶೇಖರ ಜೆ.ಸಾಲಿಯಾನ್ ಅವರನ್ನು ಬಿಎಂಸಿ ಹೆಚ್-ಈಸ್ಟ್ ವಾರ್ಡ್ನ​ ಸಹಾಯಕ ಆಯುಕ್ತೆ ಅಲ್ಕಾ ಸಸಾನೆ ಮತ್ತು ಮಾಜಿ ಬಿಎಂಸಿ​ ಮಾಜಿ ಮಹಾ ಪೌರ ಸ್ಥಾನೀಯ ನಗರ ಸೇವಕ ಪ್ರಿನ್ಸಿಪಾಲ್​ ವಿಶ್ವನಾಥ ಮಹಾಧೇಶ್ವರ್ ಇವರು ಪ್ರಶಂಸಾ ಪತ್ರ​ ಪ್ರದಾನಿಸಿ ಹೂಗುಚ್ಛದೊಂದಿಗೆ ಗೌರವಿಸಿ ಅಭಿವಂದಿಸಿದರು.

ಕೋವಿಡ್ ಯುದ್ಧದಂತಹ ಸಾಂಕ್ರಾಮಿಕ ಸಮಯದಲ್ಲಿ​ ಇಂತಹ ಜನಹಿತ ಉತ್ತಮ ಕಾಯಕವನ್ನು ನಡೆಸಿ,​ ಅಸಹಾಯಕ ಜನತೆಯ ಸೇವೆ ಮಾಡಿದ್ದು ತಮ್ಮಂತಹ​ ಸಹೃದಯಿಗ​ಳಿಂದ  ಮತ್ತಷ್ಟು ಉತ್ತಮ ಸೇವಾಕಾರ್ಯ​ ಇನ್ನೂ ಚೆನ್ನಾಗಿ ನಡೆಯಲಿ. ನಾವು ಸಮಾಜಕ್ಕೆ ನೀಡಿದರೆ,​ ಸಮಾಜ ನಮಗೆ ವಿಶೇಷ ಗೌರವವಾಗಿ ವರ ಕೊಡಬಲ್ಲದು​ ಎಂದು ಆಯುಕ್ತೆ ಅಲ್ಕಾ ಸಸಾನೆ ಆಶಯ​ ವ್ಯಕ್ತಪಡಿಸಿದರು.

ಉಡುಪಿ ಉದ್ಯಾವರದ ಬೋಳಾರಗುಡೆ ಜಿಲ್ಲು ಪೂಜಾರಿ​ ಮತ್ತು ರಾಜೀವಿ ಸಾಲ್ಯಾನ್ ದಂಪತಿ ಸುಪುತ್ರರಾದ ಶೇಖರ್​ ಸಾಲಿಯಾನ್ ಸಾಂತಕ್ರೂಜ್ ಪರಿಸರದ ಹಿರಿಯ ಸಮಾಜ​ ಸೇವಕರಾಗಿದ್ದು ಪ್ರಭಾತ್ ಕಾಲೋನಿ ಸಿಟಿಜನ್​ ಅಸೋಸಿಯೇಶನ್ ಮತ್ತು ಪ್ರಭಾತ್ ಕಾಲೋನಿ​ ಗಣೇಶೋತ್ಸವ ಮಂಡಲ ಇದರ ಅಧ್ಯಕ್ಷ​ ಆಗಿರುವರು. ಪ್ರಭಾತ್ ಕಾಲೋನಿಯಲ್ಲಿನ ಪೇಜಾವರ​ ಮಠದ ಸೇವೆಗಳಲ್ಲೂ ತನ್ನನ್ನು ತೊಡಗಿಸಿ​ ​ಕೊಂಡಿದ್ದಾರೆ. 

 

 

 
 
 
 
 
 
 
 
 
 
 

Leave a Reply