ಉಡುಪಿಯ ಡಾ ಮಹಾಬಲೇಶ್ವರ ರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ರ ಮಾನವಿಕ ವಿಭಾಗದಲ್ಲಿ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ ಎಂಬ ಕೃತಿಗೆ ಬಹುಮಾನ ಬಂದಿದ್ದು ಕಾರಣಾಂತರಗಳಿಂದ ಲೇಖಕರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಆದರೆ ಈ ದಿನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ ಬಿ.ವಿ.ವಸಂತ ಕುಮಾರ್, ಸದಸ್ಯ ಡಾ ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್ ಶ್ರೀ ಎನ್.ಕರಿಯಪ್ಪ ಲೇಖಕರ ಮನೆಗೇ ಬಂದು ಶಾಲು ಹೊದೆಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಾಂಜಿ, ಶ್ರೀ ನರಸಿಂಹ ಮೂರ್ತಿ, ಶ್ರೀ ಹರೀಶ್ ಕುಮಾರ್, ಶ್ರೀ ಮತಿ ಸುಕನ್ಯಾ ಕಳಸ ಹಾಗೂ ಇತರರು ಈ ಮನೆಯಂಗಳದ ಆತ್ಮೀಯ ಕಾರ್ಯಕ್ರಮದಲ್ಲಿ ಭಾಗವಹಿ ಸಿದರು.