ಡಾ ಮಹಾಬಲೇಶ್ವರ ರಾವ್ ಗೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ವಿತರಣೆ

ಉಡುಪಿಯ ಡಾ ಮಹಾಬಲೇಶ್ವರ ರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ರ ಮಾನವಿಕ ವಿಭಾಗದಲ್ಲಿ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ ಎಂಬ ಕೃತಿಗೆ ಬಹುಮಾನ ಬಂದಿದ್ದು ಕಾರಣಾಂತರಗಳಿಂದ ಲೇಖಕರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಆದರೆ ಈ ದಿನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ ಬಿ.ವಿ.ವಸಂತ ಕುಮಾರ್, ಸದಸ್ಯ ಡಾ ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್ ಶ್ರೀ ಎನ್.ಕರಿಯಪ್ಪ ಲೇಖಕರ ಮನೆಗೇ ಬಂದು ಶಾಲು ಹೊದೆಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಾಂಜಿ, ಶ್ರೀ ನರಸಿಂಹ ಮೂರ್ತಿ, ಶ್ರೀ ಹರೀಶ್ ಕುಮಾರ್, ಶ್ರೀ ಮತಿ ಸುಕನ್ಯಾ ಕಳಸ ಹಾಗೂ ಇತರರು ಈ ಮನೆಯಂಗಳದ ಆತ್ಮೀಯ ಕಾರ್ಯಕ್ರಮದಲ್ಲಿ ಭಾಗವಹಿ ಸಿದರು.
 
 
 
 
 
 
 
 
 
 
 

Leave a Reply