ಶ್ರೀಪುತ್ತಿಗೆ ಸಂಧ್ಯಾ ದರ್ಬಾರ್ ‌ನಲ್ಲಿ ಡಾ। ಹರಿಶ್ಚಂದ್ರ ಎಮ್. ರವರಿಗೆ ಅಭಿನಂದನೆ

ವೈದ್ಯಕೀಯ ಸೇವೆಯೊಂದಿಗೆ ಆಧ್ಯಾತ್ಮಿಕ ಸೇವೆಯಲ್ಲೂ ತನ್ನನ್ನು ಗುರುತಿಸಿಕೊಂಡು ಪುತ್ತಿಗೆ ವಿಶ್ವ ಗೀತಾ ಪರ್ಯಾಯೋತ್ಸವಕ್ಕೆ  ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡಿರುವ ಉಡುಪಿಯ ಪ್ರತಿಷ್ಠಿತ  ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ। ಹರಿಶ್ಚಂದ್ರ ಎಮ್ ರವರನ್ನು ಪರ್ಯಾಯ ಶ್ರೀ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ರಾಜಾಂಗಣದಲ್ಲಿ‌ ನಡೆದ ಸಂಧ್ಯಾ ದರ್ಬಾರ್ ‌ನಲ್ಲಿ  ಗೌರವಪೂರ್ವಕವಾಗಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಪುತ್ತಿಗೆ ಕಿರಿಯ ಸ್ವಾಮೀಜಿ  ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.

 
 
 
 
 
 
 
 
 
 
 

Leave a Reply