ಉಡುಪಿ ಆಗಸ್ಟ್ 23- ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಮತ್ತು ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ ಅಂಬಲಪಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭ ದಲ್ಲಿ ಏರ್ಪಡಿಸಿದ್ದ ” ಉಡುಪಿ ಜಿಲ್ಲಾ ಮಟ್ಟದ ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಪ್ರಬಂಧ ಸ್ಪರ್ಧೆ ಯಲ್ಲಿ ಪಟ್ಲ ಯು ಎಸ್ ನಾಯಕ್ ಪ್ರೌಢ ಶಾಲೆ ಯ ಅನನ್ಯ ಮತ್ತು ಆದಿ ಉಡುಪಿ ಪ್ರಾಢಶಾಲೆಯ ಪ್ರಜ್ವಲ್ ಪ್ರಥಮ ಬಹುಮಾನ (ರೂ 1500) ಪಡೆದಿದ್ದಾರೆ
ಕಿದಿಯೂರು ವಿದ್ಯಾ ಸಮುದ್ರ ತೀರ್ಥ ಹೈ ಸ್ಕೂಲ್ ನ ಭಾಗ್ಯಶ್ರೀ, ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಆದರ್ಶ ಕೆ ಪೂಜಾರಿ ಮತ್ತು ಆದಿ ಉಡುಪಿ ಪ್ರೌಢ ಶಾಲೆಯ ಮಂಜುನಾಥ್ ದ್ವಿತೀಯ ಬಹುಮಾನ ( ರೂ 1000 ) ಪಡೆದಿದ್ದಾರೆ.
ಹಿರಿಯಡ್ಕ kps ನ ಸೌಮ್ಯ, ಪಟ್ಲ ಯು ಎಸ್ ನಾಯಕ್ ಪ್ರೌಢ ಶಾಲೆಯ ಅಶ್ವಿನಿ ತೃತೀಯ ಬಹುಮಾನ ಪಡೆದಿದ್ದಾರೆ.
ಆಗಸ್ಟ್ 27 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.