ಮಂಗಳೂರು ವಿಶ್ವವಿದ್ಯಾನಿಲಯ, 2020 ಫೆಬ್ರುವರಿಯಲ್ಲಿ ನಡೆಸಿದ ಬಿಎಡ್ ಪದವಿ ಪರೀಕ್ಷೆಯಲ್ಲಿ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಕುಮಾರಿ ಅನುಷಾ ಎಸ್ ಶೆಟ್ಟಿ ಪ್ರಥಮ ರಾಂಕ್ ಗಳಿಸಿದ್ದಾರೆ.
ಹತ್ತು ವರ್ಷಗಳ ಬಳಿಕ ಕಾಲೇಜಿನ ವಿದ್ಯಾರ್ಥಿಯೋರ್ವರ ಈ ಸರ್ವಶ್ರೇಷ್ಠ ಸಾಧನೆಗೆ ಸಮನ್ವ ಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಅಭಿನಂದನೆ ಸಲ್ಲಿಸಿದ್ದಾರಲ್ಲದೆ ಅಧ್ಯಾಪಕ ವೃಂದದ ದುಡಿಮೆಯನ್ನು ಶ್ಲಾಘಿಸಿದ್ದಾರೆ. ಕುಮಾರಿ ಅನುಷಾ ಉದಯೋನ್ಮುಖ ಬರಹಗಾರ್ತಿ ಯಾಗಿದ್ದು ಇವರ ಕೆಲವು ಲೇಖನಗಳು ‘ಉದಯವಾಣಿ’ ಪತ್ರಿಕೆಯ ‘ಯುವ ಸಂಪದ’ ವಿಭಾಗದಲ್ಲಿ ಬೆಳಕು ಕಂಡಿದೆ.