ಸುಮನಸಾ ಕೊಡವೂರು (ರಿ.) ,ಉಡುಪಿ.ಅವರು ಅಜ್ಜರಕಾಡು ಭುಜಂಗಪಾರ್ಕ್ ನ ಬಯಲು ರಂಗಮಂದಿರದಲ್ಲಿ ನಡೆಸಿದ “ರಂಗ ಹಬ್ಬ-9” ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ, ಪ್ರಮೋದ್ ಶೆಟ್ಟಿ ಅತ್ರಾಡಿ ನಿರ್ದೇಶನದ ‘ಮನಸ್ಪೂರ್ತಿ’ ಎಂಬ ಕಿರುನಾಟಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ನಾಟಕದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ನಾಗರಾಜ್, ಚಿನ್ಮಪ್ಪ, ಹಿಮಲ್, ಪ್ರಾಕ್ಷ, ದೀಕ್ಷಾ, ಯಶ್ವಿತಾ, ನಿಧಿ, ಸಂಗೀತ ಭಾಗವಹಿಸಿದ್ದರು.
ಸಮಾರೋಪ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಉಡುಪಿಯ ಸಾಫಲ್ಯ ಟ್ರಸ್ಟ್ ನ ಪ್ರವರ್ತಕರಾದ ಶ್ರೀಮತಿ ನಿರುಪಮಾ ಶೆಟ್ಟಿ ವಿಜೇತರಿಗೆ ಪ್ರಶಸ್ತಿ ಹಸ್ತಾಂತರಿಸಿದರು, ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಮತ್ತು ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಶುಭಾಶಯ ಕೋರಿದ್ದಾರೆ.