ಡಾ.ರಶ್ಮಿ ಅಮ್ಮೆಂಬಳ ತೆಕ್ಕೆಗೆ ಕಸಾಪ ಪುರಸ್ಕಾರ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಹು , ಉಡುಪಿ ತಾಲೂಕು ಘಟಕದ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಡಾ.ರಶ್ಮಿ ಅಮ್ಮೆಂಬಳ ​ರವರನ್ನು ಗುರುತಿಸಿ ಗೌರವಿಸಲಾಯಿತು.

ಡಾ.ರಶ್ಮಿ ಅಮ್ಮೆಂಬಳ​ ಕಾರುಬಾರು:  ಪತ್ರಿಕೋದ್ಯಮ,ಸಮಾಜಶಾಸ್ತ್ರ, ತುಳು ವಿನಲ್ಲಿ ಸ್ನಾತಕೋತ್ತರ ಪದವಿ , ಎಂ.ಪಿಲ್ ಪದವಿ, ಪಿಹೆಚ್. ಡಿ ಪದವಿಯನ್ನು ಸಮುದಾಯ​ ಬಾನುಲಿಯಲ್ಲೇ ಕಾರ್ಯನಿರ್ವಹಿಸಿ ಸಮುದಾಯಬಾನುಲಿ ಸಂಬಂಧ ಪೂರೈಸಿದ್ದು ದೇಶದಲ್ಲಿಯೇ ಮೊದಲಿಗಳು.

ಪತ್ರಿಕೋದ್ಯಮ, ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಯಲ್ಲಿ ವಿಶೇಷ ಅನುಭವ. ಎಲೆಮರೆಯಲ್ಲಿದ್ದು ರಕ್ತದ ಬೇಡಿಕೆಯುಳ್ಳವರಿಗೆ ನೆರವು ನೀಡುವುದು, ಮಾಸಾಶನ, ವಿಧವಾ ವೇತನ  ಸೇರಿದಂತೆ ಅಗತ್ಯವುಳ್ಳವರಿಗೆ ಸಹಾಯ​ ಹಸ್ತ ನೀಡುವುದು ಪ್ರಮುಖ ಹವ್ಯಾಸ.


ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಸಂಯೋಜಕರಾಗಿ ಮಾಹೆ ಯ ಸಮುದಾಯ ಬಾನುಲಿಯಲ್ಲಿ ರೇಡಿಯೊ ಮಣಿಪಾಲದಲ್ಲಿ ಕರ್ತವ್ಯದಲ್ಲಿ. 30 ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಜರ್ನಲ್ಸ್ ನಲ್ಲಿ ಪ್ರಕಟಗೊಂಡಿವೆ. 3 ಪುಸ್ತಕಗಳು ಪ್ರಕಟಣೆಗೆ ಸಿದ್ದಗೊಂಡಿವೆ.
 
 
 
 
 
 
 
 
 
 
 

Leave a Reply