ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಹು , ಉಡುಪಿ ತಾಲೂಕು ಘಟಕದ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ರಶ್ಮಿ ಅಮ್ಮೆಂಬಳ ರವರನ್ನು ಗುರುತಿಸಿ ಗೌರವಿಸಲಾಯಿತು.
ಡಾ.ರಶ್ಮಿ ಅಮ್ಮೆಂಬಳ ಕಾರುಬಾರು: ಪತ್ರಿಕೋದ್ಯಮ,ಸಮಾಜಶಾಸ್ತ್ರ, ತುಳು ವಿನಲ್ಲಿ ಸ್ನಾತಕೋತ್ತರ ಪದವಿ , ಎಂ.ಪಿಲ್ ಪದವಿ, ಪಿಹೆಚ್. ಡಿ ಪದವಿಯನ್ನು ಸಮುದಾಯ ಬಾನುಲಿಯಲ್ಲೇ ಕಾರ್ಯನಿರ್ವಹಿಸಿ ಸಮುದಾಯಬಾನುಲಿ ಸಂಬಂಧ ಪೂರೈಸಿದ್ದು ದೇಶದಲ್ಲಿಯೇ ಮೊದಲಿಗಳು.
ಪತ್ರಿಕೋದ್ಯಮ, ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಯಲ್ಲಿ ವಿಶೇಷ ಅನುಭವ. ಎಲೆಮರೆಯಲ್ಲಿದ್ದು ರಕ್ತದ ಬೇಡಿಕೆಯುಳ್ಳವರಿಗೆ ನೆರವು ನೀಡುವುದು, ಮಾಸಾಶನ, ವಿಧವಾ ವೇತನ ಸೇರಿದಂತೆ ಅಗತ್ಯವುಳ್ಳವರಿಗೆ ಸಹಾಯ ಹಸ್ತ ನೀಡುವುದು ಪ್ರಮುಖ ಹವ್ಯಾಸ.
ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಸಂಯೋಜಕರಾಗಿ ಮಾಹೆ ಯ ಸಮುದಾಯ ಬಾನುಲಿಯಲ್ಲಿ ರೇಡಿಯೊ ಮಣಿಪಾಲದಲ್ಲಿ ಕರ್ತವ್ಯದಲ್ಲಿ. 30 ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಜರ್ನಲ್ಸ್ ನಲ್ಲಿ ಪ್ರಕಟಗೊಂಡಿವೆ. 3 ಪುಸ್ತಕಗಳು ಪ್ರಕಟಣೆಗೆ ಸಿದ್ದಗೊಂಡಿವೆ.