ಅಗರಿ ಭಾಸ್ಕರ ರಾವ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಡಿ: 31ರಂದು ಬೆಂಗಳೂರಿ ನಲ್ಲಿ ಅಕಾಲಿಕ ನಿಧನರಾದ ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ ಅಗರಿ ಭಾಸ್ಕರ ರಾವ್ ರವರಿಗೆ ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ಜ:02ರಂದು ಚಿಟ್ಪಾಡಿ ವಿಕಾಸ್ ನಲ್ಲಿ ಅಧ್ಯಕ್ಷ ವಿಶ್ವನಾಥ ಬಾಯರಿಯವರ ನೇತೃತ್ವದಲ್ಲಿ ಜರಗಿತು.ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯ ಮಾತನಾಡಿ ಅಗರಿಯವರು ಯಕ್ಷಗಾನ ಕ್ಷೇತ್ರದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಮಾಡಿದ ಸಾಧನೆಯ ಬಗ್ಗೆ ತಿಳಿಸಿದರು.ಪದಾಧಿಕಾರಿಗಳಾದ ಕೃಷ್ಣರಾಜ್ ಬಲ್ಲಾಳ್,ಶ್ರೀವತ್ಸ ಆಚಾರ್ಯ,ಸುಬ್ರಹ್ಮಣ್ಯ ಭಟ್,ರಮೇಶ ರಾವ್ ಮೃತರ ಆದರ್ಶ ಗುಣಗಳ ನುಡಿನಮನಗೈದರು.ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.ಸಭಾದ ಮಾಜಿ ಅಧ್ಯಕ್ಷರುಗಳಾದ ವಿಟಲ್ ಭಟ್,ಕೃಷ್ಣದಾಸ ಆಚಾರ್ಯ,ಗೋಪಾಲ ಭಟ್,ಅನಂತಕೃಷ್ಣ ಕೊಡ್ಲಾಯ,ಕೃಷ್ಣ ಭಟ್,ಪದಾಧಿಕಾರಿಗಳಾದ ರಾಘವೇಂದ್ರ ಕಲ್ಕೂರ್, ಸಿ ವಿ ಉರಾಳ್,ಶ್ರೀಪತಿ ಭಟ್,ಸತ್ಯನಾರಾಯಣ,ಪದ್ಮನಾಭ ಮಧ್ಯಸ್ಥ,ಪ್ರಕಾಶ್ ರಾವ್,ನಾರಾಯಣ ಬಲ್ಲಾಳ್, ಪ್ರಭಾಕರ ಭಟ್,ಕೃಷ್ಣಮೂರ್ತಿ ಬುಧ್ಯ,ವಾದಿರಾಜ್ ಬಾಯರಿ,ಗಣಪತಿ ಭಟ್ ಆಶಾ ರಮೇಶ್,ಲಕ್ಷ್ಮೀ ಉರಾಳ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply