ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯನಿಂಫ್ನು ಯಶಸ್ವಿಗೊಳಿಸಿ~ ವಿಜಯ ಕೊಡವೂರು

ಸಂತ ಸಮಿತಿಯ ನೇತ್ರತ್ವದಲ್ಲಿ ಹೊರಡುವ ಅಯೋಧ್ಯೆ ಪ್ರಭು ಶ್ರೀ ರಾಮ ಚಂದ್ರ ದೇವರ ದಿಗ್ವಿಜಯ ಯಾತ್ರೆಯು ಅಕ್ಟೋಬರ್‌ 5ನೇ ತಾರೀಖು ಯೋಗಿ ಆದಿತ್ಯನಾಥ ರಿಂದ ಚಾಲನೆಗೊಂಡಿದೆ. 60 ದಿನಗಳಲ್ಲಿ 27 ರಾಜ್ಯ,15,000 ಕಿ.ಮೀ. ಕ್ರಮಿಸಿ ಹಿಂದೂ ಸಮಾಜವನ್ನು ಜಾಗ್ರತಿ ಮೂಡಿಸುವ ಉದ್ದೇಶದಲ್ಲಿ , ರಾಮರಾಜ್ಯ ನಿರ್ಮಾಣದ ಕಲ್ಪನೆಯೊಂದಿಗೆ ನ.7 ರಂದು ಉಡುಪಿ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ತಿಳಿಸಿದರು.  
ಈ ದಿಗ್ವಿಜಯ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಮುಖರನ್ನು ಒಡಗೂಡಿಕೊಂಡು  ಸ್ವಾಗತ ಸಮಿತಿಯು ರಚನೆಗೊಂಡಿದ್ದು, ನವೆಂಬರ್ 7 ತಾರೀಖಿನಂದು  ಭಕ್ತಿಪೂರ್ವಕವಾಗಿ ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ರಥಯಾತ್ತೆಯನ್ನು ಸ್ವಾಗತಿಸಲು ಪೂರ್ವತಯಾರಿ ಭರದಿಂದ ನಡೆಯುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಧಾರ್ಮಿಕ ಕೇಂದ್ರಗಳು, ಸಂಘಸಂಸ್ಥೆಗಳಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಸಮಸ್ತ ಹಿಂದೂ ಬಾಂಧವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಹಕರಾಗಿದ್ದಾರೆ.
ನವೆಂಬರ್ 7 ತಾರೀಖಿನಂದು ಬೆಳಿಗ್ಗೆ 9ಗಂಟೆಗೆ ದಿಗ್ವಿಜಯ ರಥಯಾತ್ರೆಯು ಉಡುಪಿಗೆ ತಲುಪಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು.10 ಗಂಟೆಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿಕ್ಕಿದೆ. ಈ ಸಭಾಕಾರ್ಯಕ್ರಮದಲ್ಲಿ ಸಂತಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಕ್ತಿ ಶಾಂತಾನಂದ ಸ್ವಾಮೀಜಿಯವರು, ರಾಮಮಂದಿರದ ವಿಶ್ವಸ್ಥರೂ ಆದ ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿರುವರು.
ಹಾಗೆಯೇ ನಾಡಿನ ಗಣ್ಯಾತಿಗಣ್ಯರ ಉಪಸ್ಥಿತಿ ಇರುವುದು. ಧಾರ್ಮಿಕ ಸಭಾಕಾರ್ಯಕ್ರಮದ  ಬಳಿಕ ಅಯೋಧ್ಯೆಯಿಂದ  ದಿಗ್ವಿಜಯ ರಥಯಾತ್ರೆಯಲ್ಲಿ ಬರುವ ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲು ಭಕ್ತಾಭಿಮಾನಿಗಳಿಗೆ ಅವಕಾಶ ಇರುವುದು. ತದನಂತರ ಸಂತೆಕಟ್ಟೆಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಬ್ರಹತ್ ವಾಹನ ಜಾಥಾದ  ಮೂಲಕ ಕಾರು ಮತ್ತು ಬೈಕ್ ನಲ್ಲಿ ಸಾಗಿ ಯಾತ್ರೆಯು ಸಮಾಪನಗೊಳ್ಳಲಿದೆ.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೇರಿರುವ ಭಕ್ತಾಭಿಮಾನಿಗಳಿಗೆ ನಾಡೋಜ ಡಾ.ಜಿ. ಶಂಕರ್ ಇವರ ಸಹಕಾರದಿಂದ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಆಗಬೇಕೆನ್ನುವ ಹಿಂದೂಗಳ ಬಲುದೊಡ್ಡ ಕನಸು ನನಸಾಗಲಿರುವ ಈ ಒಂದು ಸುಸಂದರ್ಭದಲ್ಲಿ ಉಡುಪಿಯ ಭಕ್ತಾಭಿಮಾನಿಗಳಿಗೆ ಅಯೋಧ್ಯೆಗೆ ಹೋಗಿ ರಾಮನ ಸೇವೆಯನ್ನು ಮಾಡಲಿಕ್ಕೆ ಆಗದಿದ್ದರೂ, ಅಯೋಧ್ಯೆಯಿಂದ ಬರುವ ಈ ದಿಗ್ವಿಜಯ ರಥಯಾತ್ರೆ ಯಲ್ಲಿ ಪಾಲ್ಗೊಂಡು ಪುನೀತರಾಗುವ ಅವಕಾಶ ಸಿಕ್ಕಿದೆ.
 
ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಉಡುಪಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಪುಣ್ಯಕಾರ್ಯದಲ್ಲಿ, ಧರ್ಮಕಾರ್ಯದಲ್ಲಿ ಭಾಗವಹಿಸಬೇಕಾಗಿ ವಿನಂತಿ. ಸದ್ಭಕ್ತರೆಲ್ಲರೂ ಸಾಂಪ್ರದಾಯಿಕ  ಉಡುಗೆ- ತೊಡುಗೆಯಲ್ಲಿ  ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸ್ವಾಗತ ಸಮಿತಿ ರಾಮ ಭಕ್ತರಲ್ಲಿ ವಿನಂತಿಸಿದೆ. 
ಪತ್ರಿಕಾ ಗೋಷ್ಠಿಯಲ್ಲಿ ಆನಂದ ಶೆಟ್ಟಿ ಅಧ್ಯಕ್ಷರು, ವಿಜಯ ಕೊಡವೂರು, ಪ್ರಧಾನ ಕಾರ್ಯದರ್ಶಿ, ಮನೋಹರ್ ಶೆಟ್ಟಿ ತೋನ್ಸೆ ಉಪಾಧ್ಯಕ್ಷರು, ತಾರಾ ಉಮೇಶ್ ಆಚಾರ್ಯ ಮಹಿಳಾ ಪ್ರಮುಖರು ಹಾಗು  ರಾಮ ಪೂಜಾರಿ ಸಂತೆಕಟ್ಟೆ ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply