ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಮಂಗಳವಾರ 122ನೇ ಭಜನಾ ಸಾಪ್ತಾಹ ಮಂಗಲೋತ್ಸವ ಪ್ರಯುಕ್ತ ನೂರಾರು ಭಕ್ತರು ದೇವರಿಗೆ ಭಕ್ತಿ ಯಿಂದ ಉರುಳು ಸೇವೆ ಸಲ್ಲಿಸಿ ದೇವರ ಪ್ರಸಾದ ಪಡೆದು ಧನ್ಯರಾದರು.
ಅರ್ಚಕ ವಿನಾಯಕ ಭಟ್, ಗಿರೀಶ ಭಟ್, ಆಡಳಿತ ಮುಕ್ತೇಸರ ಪಿ.ವಿ.ಶೆಣೈ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.