ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷ ತುಳಸೀ ಅರ್ಚನೆ, ಸಹಸ್ರನಾಮಾವಳಿ ಹಾಗೂ ಶ್ರೀ ವಿಷ್ಣುಯಾಗ

ಪುತ್ತೂರು ಬ್ರಾಹ್ಮಣ ಮಹಾಸಭಾದ ಲಕ್ಷ ತುಳಸೀ ಅರ್ಚನೆ, ಸಭಾದ ಸದಸ್ಯರಿಂದ ಸಹಸ್ರನಾಮಾವಳಿ ಪಾರಾಯಣ ಹಾಗೂ ಶ್ರೀ ವಿಷ್ಣುಯಾಗ ಕಾರ್ಯಕ್ರಮವು ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ 15.08.2021ರಂದು ದೇವತಾ ಪ್ರಾರ್ಥನೆಯೊಂದಿಗೆ ಬೆಳಿಗ್ಗೆ  ಪ್ರಾರಂಭವಾಯಿತು 

ಈ ಸಂದರ್ಭದಲ್ಲಿ ಸಭಾದ ಮಹಿಳೆಯರಿಂದ ಲಕ್ಷ್ಮೀಶೋಭಾನೆ ಹಾಗೂ ಭಜನೆ ನೆರವೇರಿತು. ಮಹಾಪೂಜೆ, ಹೋಮದ ಪೂರ್ಣಾಹುತಿ, ಸದಸ್ಯರುಗಳಿಗೆ ಸೇವಾಪ್ರಸಾದ ವಿತರಣೆ ಮತ್ತು ಬ್ರಾಹ್ಮಣಾರಾಧನೆ ನಡೆಯಿತು. 

ಕಾರ್ಯಕ್ರಮದ ಕಡೆಯಲ್ಲಿ ಭಗವದ್ಗೀತೆಯ ಜಾಲತಾಣದ ಮೂಲಕ ಕಲಿಕಾ ಶಿಬಿರವನ್ನು ಉದ್ಘಾಟಿಸಲಾಯಿತು. ಸ್ವಾತಂತ್ರೋತ್ಸವದ ಪ್ರಯುಕ್ತ ನಡೆದ ಮಕ್ಕಳ ವಿವಿಧ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.

 
 
 
 
 
 
 
 
 
 
 

Leave a Reply